Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label xOthr. Show all posts
Showing posts with label xOthr. Show all posts

January 21, 2011

Devi Khadgamala Stotra in Kannada / ದೇವಿ ಖಡ್ಗಮಾಲಾ ಸ್ತೋತ್ರ

ದೇವಿಯ ಇನ್ನೊಂದು ಸ್ತೋತ್ರ ಇಲ್ಲಿದೆ. ಹೆಸರೇ ಹೇಳುವಂತೆ ಈ ಸ್ತೋತ್ರವನ್ನು ಪಠಿಸಿದರೆ ನಿಮಗೆ ದೇವಿಯ ಖಡ್ಗದ ಮಾಲೆ ಲಭಿಸುವುದು. ಅಂದರೆ ದೇವಿಯು ನಿಮ್ಮನ್ನು ಸದಾ ಕಾಪಡುತ್ತಾಳೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



1.Audio Link by Nithya Santhoshini Gayatri [song 2]

2.Audio Link by Priya Sisters

3.Audio link by T.S.Ranganathan

4.Audio Link [song 3]

August 2, 2010

Surya Pratah Smarana Stotra / ಸೂರ್ಯ ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ಸೂರ್ಯ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Ravindra Sathe[song 6]

2.Audio Link by Shubha Mudgal[song 2]

July 24, 2010

Vaibhava Lakshmi Vrata in Kannada / ವೈಭವ ಲಕ್ಷ್ಮಿ ವ್ರತ

ಕಳೆದ ಹಲವು ದಿನಗಳಲ್ಲಿ ಬಹಳ ಜನ ಓದುಗರು ವೈಭವ ಲಕ್ಷ್ಮಿ ವ್ರತದ ಬಗ್ಗೆ ಬರೆಯಿರಿ ಅಂತ ಕೋರಿಕೆ ಮಾಡಿದ್ದರೆ. ಹಾಗಾಗಿ ಈ ವೈಭವ ಲಕ್ಷ್ಮಿ ಪೂಜೆ ಬಗ್ಗೆ ವಿವರ ಇಲ್ಲಿದೆ.ಈ ವ್ರತವನ್ನು ಶುಕ್ರವಾರ ಸಂಜೆ ಮಾಡಬೇಕು. ಲಕ್ಷ್ಮೀ ಯಂತ್ರವನ್ನು ರಂಗೊಲಿಯಾಗಿ ಬರೆಯಬಹುದು ಅಥವಾ ಚಿತ್ರವನ್ನು ಇಡಬಹುದು. ಇದರ ಮೇಲೆ ಒಂದು ಕಲಶ ಪಾತ್ರೆಯಲ್ಲಿ ಆಭರಣ ಇಟ್ಟು ಪೂಜೆ ಮಾಡಬೇಕು. ಹೀಗೆ ೫ ಶುಕ್ರ ವಾರ ಪೂಜೆ ಮಾಡಿದ ನಂತರ ೮ ಜನ ಸುಮಂಗಲಿಯರಿಗೆ ಅರಿಶಿನ ಕುಂಕುಮ ಹಾಗು ಈ ಪುಸ್ತಕದ ಒಂದು ಪ್ರತಿಯನ್ನು ಕೊಡಬೇಕು.ಪೂಜಾ ವಿಧಾನದ ಪೂರ್ಣ ವಿವರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Lakshmi yantra / Vaibhava lakshmi Rangoli(left side)
Vaibhava Lakshmi Pooja Vidhana in Kannada - scanned from book
12345

6789
----------------------------------------------------

Lakshmi Stotras:

1.Vaibhava Lakshmi Pooja Vidhana Audio in Kannada

2.Mahalakshmi Ashtakam

3.Lakshmi Ashtottara

4.Ashtalakshmi Stotra

5.Kanakadhara Stotra

6.Lakshmi Songs with lyrics


ವೈಭವ ಲಕ್ಷ್ಮಿಯು ಎಲ್ಲರಿಗೂ ಐಶ್ವರ್ಯ ಅಭಿವೃದ್ಧಿ ಕೊಟ್ಟು ಕಾಪಾಡಲಿ :)

July 10, 2010

Shiva Pratah Smarana Stotra / ಶ್ರೀ ಶಿವ ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ಶ್ರೀ ಶಿವ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio by Ashit Desai

2.Audio by Shashi Jha

3.Audio by Ravindra Sathe

4.Audio by O.S.Arun [does not work]

Related Link:

March 25, 2010

Durga Kavacham / ಶ್ರೀ ದುರ್ಗಾ ದೇವಿ ಕವಚಮ್

ಈಶ್ವರ ಉವಾಚ
ಶ್ರೃಣು ದೇವಿ ಪ್ರವಕ್ಷ್ಯಾಮಿ ಕವಚಂ ಸರ್ವಸಿದ್ಧಿದಮ್
ಪಠಿತ್ವಾ ಪಾಠಯಿತ್ವಾ ಚ ನರೋ ಮುಚ್ಯೇತ ಸಂಕಟಾತ್ ೧

ಅಜ್ಞಾತ್ವಾ ಕವಚಂ ದೇವಿ ದುರ್ಗಾಮಂತ್ರಂ ಚ ಯೋ ಜಪೇತ್
ಸ ನಾಪ್ನೋತಿ ಫಲಂ ತಸ್ಯ ಪರಂ ಚ ನರಕಂ ವ್ರಜೇತ್ ೨

ಉಮಾದೇವೀ ಶಿರಃ ಪಾತು ಲಲಾಟೇ ಶೂಲಧಾರಿಣೀ
ಚಕ್ಷುಷೀ ಖೇಚರೀ ಪಾತು ಕರ್ಣೌ ಚತ್ವರವಾಸಿನೀ ೩

ಸುಗಂಧಾ ನಾಸಿಕೇ ಪಾತು ವದನಂ ಸರ್ವಧಾರಿಣೀ
ಜಿಹ್ವಾಂ ಚ ಚಂಡಿಕಾದೇವೀ ಗ್ರೀವಾಂ ಸೌಭದ್ರಿಕಾ ತಥಾ ೪

ಅಶೋಕವಾಸಿನೀ ಚೇತೋ ದ್ವೌ ಬಾಹೂ ವಜ್ರಧಾರಿಣೀ
ಹೃದಯಂ ಲಲಿತಾದೇವೀ ಉದರಂ ಸಿಂಹವಾಹಿನೀ ೫

ಕಟಿಂ ಭಗವತೀ ದೇವೀ ದ್ವಾವೂರೂ ವಿಂಧ್ಯವಾಸಿನೀ
ಮಹಾಬಲಾ ಚ ಜಂಘೇ ದ್ವೇ ಪಾದೌ ಭೂತಲವಾಸಿನೀ ೬

ಏವಂ ಸ್ಥಿತಾಸಿ ದೇವಿ ತ್ವಂ ತ್ರೈಲೋಕ್ಯೇ ರಕ್ಷಣಾತ್ಮಿಕಾ
ರಕ್ಷ ಮಾಂ ಸರ್ವಗಾತ್ರೇಷು ದುರ್ಗೇ ದೇವಿ ನಮೋಸ್ತುತೇ ೭

ಇತಿ ದುರ್ಗಾ ಕವಚಂ ಸಂಪೂರ್ಣಮ್


1.Audio Link by Bombay Sisters

2.Audio Link by Syama

3.Audio Link by Sulamangala sisters

4.Audio link by T.S. Sastry

February 11, 2010

Shiva Rudrashtakam in Kannada / ಶಿವ ರುದ್ರಾಷ್ಟಕಂ

"ಎಲ್ಲರಿಗೂ ಶಿವರಾತ್ರಿ ಹಬ್ಬದ ಶುಭಾಶಯಗಳು"

ಶಿವರಾತ್ರಿ ಹಬ್ಬದ ಪ್ರಯುಕ್ತ ಇನ್ನೊಂದು ಶಿವ ಸ್ತೋತ್ರ ಇಲ್ಲಿದೆ. ಶಿವ ರುದ್ರಾಷ್ಟಕ ಸ್ತೋತ್ರವನ್ನು ಶ್ರೀ ತುಲಸೀದಾಸರು ರಚಿಸಿದ್ದಾರೆ. ಇದರಲ್ಲಿ ಹೆಸರೇ ಹೇಳುವಂತೆ ೮ ಪಂಕ್ತಿಗಳಿವೆ.
ಶ್ರೀ ಶಿವ ರುದ್ರಾಷ್ಟಕ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.




1.Audio Link by Thyagarajan R[song 6]

2.Audio Link by Ramesh Oza

3.Audio Link by Ashit Desai

4.Audio Link by another artist

Related Link:

November 11, 2009

Anjaneya Ashtottara in Kannada / ಆಂಜನೇಯ ಅಷ್ಟೋತ್ತರ

ಶ್ರೀ ಆಂಜನೇಯ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



1.Hanuman ashtottara Audio link - by Thiyagarajan

2.Hanumana ashtottara Audio link - by Achuta Rama Sashtry

Related Link: Hanuman Chalisa

July 6, 2009

Guru Poornima / Vyasa Poornima /ಗುರು ಪೂರ್ಣಿಮಾ / ವ್ಯಾಸ ಪೂರ್ಣಿಮಾ


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ


ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆಯನ್ನು ಆಷಾಢ ಮಾಸದ ಪೂರ್ಣಿಮೆಯ ದಿನ ಆಚರಿಸುತ್ತಾರೆ. ಇಂದು ವೇದ ವ್ಯಾಸರ ಜನ್ಮ ದಿನ. ಇವರು ೪ ವೇದಗಳನ್ನು ಸಂಕಲನ ಮಾಡಿದರು ಎಂಬ ನಂಬಿಕೆ. ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೇಶ. ಈ ಗುರಿಯನ್ನು ತಲುಪುವುದಕ್ಕೆ ವೇದಗಳು ಪ್ರಮುಖ ಪಾತ್ರ ಹೊಂದಿದೆ. ಈ ವೇದಗಳನ್ನು ನಮಗೆ ಕೊಟ್ಟಿರುವ ವೇದ ವ್ಯಾಸರು ಧರ್ಮ ಗುರುಗಳು. ಇವರಿಗೆ ನಮ್ಮ ಅನಂತ ನಮಸ್ಕಾರಗಳು.

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಪೂರ್ಣಿಮೆಯ ದಿನ ಚಂದ್ರನು ಪ್ರಕಾಶಮಾನ ಆಗಿರುತ್ತಾನೆ. ಚಂದ್ರನಂತೆ ಪ್ರಕಾಶಿಸುತ್ತಿರುವ ಗುರುವು ನಮ್ಮ ಬಾಳಲ್ಲಿರುವ ಅಂಧಕಾರವನ್ನು ತೊಲಗಿಸಿ , ಜ್ಞಾನದ ಬೆಳಕನ್ನು ಕೊಡುತ್ತಾನೆ ಎಂಬ ಸಂಕೇತವಾಗಿ ಈ ಗುರು ಪೂರ್ಣಿಮಾ ಹಬ್ಬವನ್ನು ಆಚರಿಸುತ್ತಾರೆ.

ಶಂಕರಾಚಾರ್ಯರು, ದತ್ತಾತ್ರೇಯರು, ರಾಘವೇಂದ್ರ ಸ್ವಾಮಿಗಳು, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ ,ಸಾಯಿ ಬಾಬರವರು, ಶ್ರೀ ರವಿಶಂಕರ - ಹೀಗೆ ಹಲವಾರು ಮಹಾಪುರುಷರು ಗುರು ಸ್ವರೂಪರಾಗಿ ನಮಗೆಲ್ಲ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಇಷ್ಟದಂತೆ ಗುರುಗಳನ್ನು ಅನುಸರಿಸುತ್ತಾರೆ. ಈ ದಿನ ಇಷ್ಟೊಂದು ಪ್ರಾಬಲ್ಯ, ಮಹಿಮೆ ಇರುವ ಗುರುಗಳಿಗೆ ನಮನಗಳನ್ನು ಸಲ್ಲಿಸುತ್ತಾರೆ. ಇದಲ್ಲದೇ ನಮ್ಮ ತಾಯಿ, ತಂದೆ, ಪಾಠ/ವಿದ್ಯೆ/ಸಂಗೀತ/ಕಲೆ ಹೇಳಿಕೊಟ್ಟಿರುವ ಗುರುಗಳು - ಇವರಿಗೂ ನಮಸ್ಕಾರಗಳನ್ನು ಸಲ್ಲಿಸಬೇಕು.

ಹಬ್ಬವನ್ನು ಆಚರಿಸುವುದಕ್ಕೆ ವಿಶೇಷವಾದ ಪೂಜೆ ಅಂತಿಲ್ಲ. ನಂಬಿರುವ ಗುರುಗಳ ಪೂಜೆ ಮಾಡುತ್ತಾರೆ. ಗುರುಗಳ ಧ್ಯಾನ, ಭಜನೆ ಮಾಡುತ್ತಾರೆ. ಕೆಲವರು ಸತ್ಸಂಗ ಏರ್ಪಡಿಸುತ್ತಾರೆ. ಹಲವು ಕಡೆ ಗುರುಗಳಿಗೆ ಸತ್ಕಾರ ಕಾರ್ಯಕ್ರಮ(felicitation) ಇರುತ್ತದೆ. ಒಟ್ಟಿನಲ್ಲಿ ಈ ದಿನ ಗುರುವಿನ ಸ್ಮರಣೆಗೆ ಮೀಸಲಾಗಿದೆ.


Useful Links:

ಗುರುಗಳು ನಮ್ಮೆಲರಿಗೂ ಜ್ಞಾನ ನೀಡಿ ಕಾಪಾಡಲಿ :)

May 6, 2009

Narasimha Jayanti, Lakshmi Narasimha Ashtottara Shatanama in Kannada

ನರಸಿಂಹ ಜಯಂತಿ , ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ


ವಿಷ್ಣುವಿನ ಹತ್ತವತಾರದಲ್ಲಿ ನರಸಿಂಹ ಅವತಾರವು ಒಂದು. ಅರ್ಧ ಮನುಷ್ಯ ಅರ್ಧ ಸಿಂಹ ಇರುವ ರೂಪ. ಭಕ್ತ ಪ್ರಹ್ಲಾದನ ಮೊರೆಯನ್ನು ಕೇಳಿ ಕಂಭ ಒಡೆದು ಪ್ರತ್ಯಕ್ಷನಾಗಿ, ಹಿರಣ್ಯ ಕಷಿಪುವನ್ನು ವಧೆ ಮಾಡಿ ಪ್ರಹ್ಲಾದನನ್ನು ಶ್ರೀ ನೃಸಿಂಹ ಕಾಪಾಡಿದನು.

ನರಸಿಂಹ ಜಯಂತಿ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದನ್ನು ಶ್ರೀ ವೈಷ್ಣವರು, ಸೌರಮಾನ ಪಂಚಾಂಗ ಅನುಸರಿಸುವರು ಬೇರೆ ತಿಥಿ ನಕ್ಷತ್ರದಲ್ಲಿ ಆಚರಿಸುತ್ತಾರೆ. ದಿನ ಲಕ್ಷ್ಮಿ ನರಸಿಂಹ ಸ್ವಾಮಿಗೆ
ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಕೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತ ಮಾಡುತ್ತಾರೆ. ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ ಪಟ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio of Narasimha Ashtottara - by VidyaBhushana

2.Audio link by T.Srinivas

ಶ್ರೀ ನರಸಿಂಹ ಸ್ತೋತ್ರಗಳು, ಹಾಡುಗಳು:

ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ :)

March 31, 2009

Rama Ashtottara in Kannada / ಶ್ರೀ ರಾಮ ಅಷ್ಟೋತ್ತರ

ರಾಮ ನವಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ಶ್ರೀ ರಾಮ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಅಷ್ಟೊತ್ತರದ ಧ್ವನಿ ಮುದ್ರಣ ಕೆಳಗಿದೆ.

1. Audio link by Shiva kumar


2. Audio Link by Hari Achuta Shastry


3. Audio link by N.S.Prakash Rao

Related Link:

February 14, 2009

Shiva Suprabhatam in Kannada / ಶ್ರೀ ಶಿವ ಸುಪ್ರಭಾತ

ಶ್ರೀ ಶಿವ ಸುಪ್ರಭಾತ ಅಷ್ಟು ಜನಪ್ರಿಯವಾದ ಸ್ತೋತ್ರವೇನಲ್ಲ. ಬಹಳಷ್ಟು ಜನ ಇದನ್ನು ಕೇಳೇ ಇಲ್ಲದಿರಬಹುದು. ನಾನೂ ಇತ್ತೀಚಿಗೆ ಇದನ್ನು ಕೇಳಿದ್ದು. ವಿಜಯ ಶಂಕರ ಅವರ ಸುಮಧುರ ಧ್ವನಿಯಲ್ಲಿ ಈ ಸ್ತೋತ್ರವನ್ನು ಕೇಳಿದೊಡನೆ ನನಗೆ ಬಹಳ ಇಷ್ಟ ಆಯಿತು. ನಿಮ್ಮೊಡನೆಇದನ್ನು ಹಂಚಿಕೊಳ್ಳುವ ಆಸೆ ಆಯಿತು:) ಈ ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಈ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು.

1.AudioLink by Vijaya Shanker[song 4]

Related Link:

October 6, 2008

Durga Ashtottara Shatanama Stotra / ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ

"ಎಲ್ಲರಿಗೂ ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು "
ದುರ್ಗಾ ದೇವಿಯ ಇನ್ನೊಂದು ಸ್ತೋತ್ರ - ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ ಇಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .
ಶತನಾಮ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು -
1.Audio Link - by Ravindra Sathe

2.Another Audio Link

ದುರ್ಗಾ ಸ್ತೋತ್ರಗಳು :

Link to Durga Ashtottara Shatanama Stotra in Hindi and English



September 22, 2008

Durga Pancharatna Stotra in Kannada / ಶ್ರೀ ದುರ್ಗಾ ಪಂಚರತ್ನ ಸ್ತೋತ್ರ

ಶ್ರೀ ದುರ್ಗಾ ಪಂಚರತ್ನ ಸ್ತೋತ್ರ ಎಲ್ಲರಿಗೂ ಗೊತ್ತಿಲ್ಲದಿರಬಹುದು. ಇದನ್ನು ಜಗದ್ಗುರು ಶ್ರೀ ಚಂದ್ರಶೇಖರ ಸರಸ್ವತಿ ಸ್ವಾಮಿಗಳು ರಚಿಸಿದ್ದಾರೆ. ಇದು ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ. ಇದನ್ನು M.S.Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.


ಪಂಚರತ್ನದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link
ಇದನ್ನು kannadaaudio.com ಇಂದ ತೆಗೆದುಕೊಂಡಿದ್ದೀನಿ.

August 31, 2008

Ganesha Chaturthi/ Ganesha Habba/ ಶ್ರೀ ವರಸಿದ್ಧಿ ವಿನಾಯಕ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

------------------------------------------------------------------------------------
ಶ್ರೀ ವರಸಿದ್ಧಿ ವಿನಾಯಕ ವ್ರತ / ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸುತ್ತಾರೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಅವರ ಮನೆಯ ಪದ್ಧತಿ ಪ್ರಕಾರ ಮಣ್ಣಿನ ಗಣಪತಿ / ಬೆಳ್ಳಿ ಗಣಪತಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಜನಿವಾರ, ಹತ್ತಿ ಎಳೆ, ಹುಲ್ಲಿನ ಗರಿಕೆ ಬೇಕಾಗುತ್ತೆ. ಮೊದಲು ಮನೆಯ ಗಣಪತಿಗೆ ಪೂಜೆ ಮಾಡಿ ನಂತರ ದೊಡ್ಡ ಗಣಪತಿಗೆ ಪೂಜೆ ಮಾಡಬೇಕು. ಗಣಪತಿಗೆ 21 ಹಿಡಿ 21 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ 21 ಕಡುಬು, ಮೋದಕ ಮಾಡುತ್ತಾರೆ. ತಿಂಡಿ ಪ್ರಿಯನಾದ ಗಣಪತಿಗೆ ಇದರೊಂದಿಗೆ ಬಗೆಬಗೆಯ ತಿಂಡಿಗಳನ್ನು ನೈವೇದ್ಯಕ್ಕೆ ಮಾಡುತ್ತಾರೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.
ಗೌರಿ ಗಣೇಶ ಹಬ್ಬ

ಗಣಪತಿ ಹಬ್ಬದ ಚಂದ್ರನನ್ನು ನೋಡಬಾರದು ಅಂತ ಇದೆ. ನೋಡಿದರೆ ನಿಮ್ಮ ಮೇಲೆ ಮಿಥ್ಯಾಪವಾದ ಬರುತ್ತೆ ಅಂತ ಹೇಳುತ್ತಾರೆ. ಒಂದು ವೇಳೆ ಅಕಸ್ಮಾತ್ ಚಂದ್ರದರ್ಶನ ಮಾಡಿದಲ್ಲಿ, ಅದರ ದೋಷ ಪರಿಹಾರಕ್ಕಾಗಿ ಸ್ಯಮಂತಕೋಪಾಖ್ಯಾನವನ್ನು(ಶಮಂತಕ ಮಣಿ ಕಥೆ) ಶ್ರವಣ ಮಾಡಿ, ಈ ಶ್ಲೋಕವನ್ನು ಪಠಿಸಬೇಕು.

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾರೋಧಿಃ ತವಹ್ಯೇಷಃ ಸ್ಯಮಂತಕಃ ||


ಸ್ನೇಹಿತರೇ ಈ ವರ್ಷ ಜೋಕೆಯಾಗಿ ಇರಿ ಆಯಿತಾ :)

ವರ ಸಿದ್ಧಿ ವಿನಾಯಕ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು-
Varasiddhi Vinayaka Vrata + Kathe Audio link by Ganapathi Shastri (kannada audio)[needs real player]

Varasiddhi Vinayaka Vrata + Kathe Audio Link by Ganapathi Shastri (updated Aug 2018)
Varasiddhi Vinayaka Vrata + Kathe Audio Link by Raghavan Shastri


ಗಣಪತಿ ಪೂಜೆ

ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡಬೇಕು. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ದೇವರನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಮಣ್ಣಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡುತ್ತಾರೆ. "ಗಣೇಶ ಬಂದ, ಹೊಟ್ಟೆ ಮೇಲೆ ಗಂಧ, ಕಾಯಿ ಕಡುಬು ತಿಂದ , ಚಿಕ್ಕ ಕೆರೇಲಿ ಬಿದ್ದ , ದೊಡ್ಡ ಕೆರೇಲಿ ಎದ್ದ " ಅಂತ ಹೇಳಿಕೊಂಡು ಗಣಪತಿಯನ್ನು ನೀರಲ್ಲಿ ಮುಳುಗಿಸುವುದು:)

ಗಣಪತಿ ಹಾಡು/ ಸ್ತೋತ್ರಗಳು:


ವರಸಿದ್ಧಿ ವಿನಾಯಕ ನಿಮ್ಮ ಎಲ್ಲ ಕಾರ್ಯಗಳನ್ನು ಸಿದ್ಧಿಸಲಿ :)

Related Link:
Songs on lord Ganesha with lyrics
Swarna Gowri Vratha

August 28, 2008

Sri Swarna Gowri Vrata/ Gowri Habba/ ಶ್ರೀ ಸ್ವರ್ಣ ಗೌರಿ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

------------------------------------------------------------------------------------


ಶ್ರೀ ಸ್ವರ್ಣ ಗೌರಿ ವ್ರತ / ಗೌರಿ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ತ್ರಿತೀಯ/ತದಿಗೆ ದಿನ ಆಚರಿಸುತ್ತಾರೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು. ಅವರ ಮನೆಯ ಪದ್ಧತಿ ಪ್ರಕಾರ ಅರಿಶಿನದ ಗೌರಿ /ಮಣ್ಣಿನ ಗೌರಿ / ಬೆಳ್ಳಿ ಗೌರಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ.



ಗೌರಿ ದೇವಿಗೆ ಪೂಜೆ
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಗೌರಿ ದಾರ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ಮರದ ಜೊತೆ ಬಾಗಿನ ಬೇಕಾಗುತ್ತೆ. ಮೊದಲು ಗಣಪತಿ ಪೂಜೆ ಮಾಡಿ ನಂತರ ಸ್ವರ್ಣಗೌರಿಗೆ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಒಬ್ಬಟ್ಟು/ಹೋಳಿಗೆ ಮಾಡುತ್ತಾರೆ. ಗೌರಿ ದಾರಕ್ಕೆ ಪೂಜೆ ಮಾಡಿ ನಿಮ್ಮ ಕೈಗೆ ಕಟ್ಟಿಕೊಳ್ಳಬೇಕು. ಗೌರಿ ದೇವಿಗೆ ಒಂದು ಮರದ ಜೊತೆ ಬಾಗಿನ ಕೊಡಬೇಕು. ಇದಲ್ಲದೇ ಸುಮಂಗಲಿಯರಿಗೆ ನಿಮ್ಮ ಇಚ್ಛೆ , ಶಕ್ತಿ ಅನುಸಾರ 1/4/5/8/16 ಮರದ ಬಾಗಿನ ಕೊಡಬಹುದು. ಮೊರದ ಜೊತೆ ಬಾಗಿನದ ವಿವರ ಇಲ್ಲಿದೆ. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.

ಮರದ ಬಾಗಿನ

ಸ್ವರ್ಣ ಗೌರಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು-
Swarna Gowri Vrata + kathe Audio link
(kannada audio)

Swarna Gowri Vrata + kathe Audio link (updated Aug 2018)

Swarna Gouri Vratha Audio by Bharatiya Vidya Bhavan

ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡಬೇಕು. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ಗೌರಿಯನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ.
ದೇವಿಯ ಹಾಡು/ ಸ್ತೋತ್ರಗಳು:
ಲಲಿತ ಅಷ್ಟೋತ್ತರ
ಲಲಿತ ಸಹಸ್ರನಾಮ
ಮಹಿಷಾಸುರ ಮರ್ದಿನೀ ಸ್ತೋತ್ರ
ದುರ್ಗಾ ಪಂಚರತ್ನ

ಸೌಂದರ್ಯ ಲಹರಿ
ಲಲಿತ ಪಂಚರತ್ನ
ದೇವಿ ನವರತ್ನ ಮಾಲಿಕಾ ಸ್ತೋತ್ರ
ದುರ್ಗಾಅಷ್ಟೋತ್ತರ
All Devi Stotras and Songs
Ganesha Chaturthi
ಸ್ವರ್ಣ ಗೌರಿಯ ಕೃಪೆ ಎಲ್ಲರಿಗೂ ಸದಾ ಇರಲಿ :)

August 11, 2008

Sri Mangala Gowri Vrata / ಶ್ರೀ ಮಂಗಳಗೌರಿ ವ್ರತ

ಶ್ರೀ ಮಂಗಳ ಗೌರಿ ವ್ರತವನ್ನು ಶ್ರವಣ ಮಾಸದಲ್ಲಿ ಪ್ರತಿ ಮಂಗಳವಾರ ಆಚರಿಸುತ್ತಾರೆ. 4/5 ಮಂಗಳವಾರ ಪೂಜೆ ಮಾಡುತ್ತಾರೆ. ಮದುವೆಯ ನಂತರ 5 ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ರಂಗೋಲಿಯಿಂದ ಅಲಂಕರಿಸಬೇಕು. ಒಂದು ಮಣೆ ಇಟ್ಟು, ಅದರ ಮೇಲೆ ರವಿಕೆ ಬಟ್ಟೆ ಹಾಸಿ, ಅದರ ಮೇಲೆ ಒಂದು ತಟ್ಟೆಯಲ್ಲಿ ದೇವರನ್ನು ಇಡಬೇಕು.ಗಣಪತಿ, ಗೌರಿ ವಿಗ್ರಹ, ಅರಿಶಿನದ ಗೌರಮ್ಮ(ಸ್ವಲ್ಪ ಅರಿಶಿನಕ್ಕೆ ಚೂರು ಹಾಲು ಹಾಕಿ ಕಲೆಸಿ ಗೋಪುರದ ಆಕರ ಕೊಡಿ), ಕನ್ನಡಿ, ಕಲಶ, ಇವುಗಳನ್ನು ಇಟ್ಟುಕೊಳ್ಳಬೇಕು. 3 ರವಿಕೆ ಬಟ್ಟೆಯನ್ನು ತ್ರಿಕೋಣಾಕಾರದಲ್ಲಿ (triangle) ಮಡಿಸಿ ಹಿಂದೆ ಇಡಬೇಕು.

ಒಂದು ಸಣ್ಣ ಚೊಂಬಿನ ಒಳಗೆ ಸ್ವಲ್ಪ ಅಕ್ಕಿ, ಮಂತ್ರಾಕ್ಷತೆ ಹಾಕಿ, ಇದರ ಮೇಲೆ ರವಿಕೆ ಬಟ್ಟೆ ಇಟ್ಟು, ಒಂದು ಕೊಬ್ಬರಿ ಗಿಟುಕನ್ನು ಇಡಬೇಕು. ಇದಕ್ಕೆ ಕಪ್ಪಿನಿಂದ ಕಣ್ಣು, ಮುಗು ಬರೆದು, ಅಲಂಕರಿಸಿ. ಇದೇ ಮಂಗಳಗೌರಿ ಮೂರ್ತಿ,ಇದಕ್ಕೆ ಪೂಜೆ ಮಾಡಬೇಕು. ಕೆಲವುಮನೆಗಳಲ್ಲಿ ಮಣೆಗೆ ರವಿಕೆ ಬಟ್ಟೆಯ ಬದಲು ಶಲ್ಯ ಹಾಸುತ್ತಾರೆ, ಕೆಲವರು ದೇವಿಯ ಎರಡು ಬದಿಯಲ್ಲಿ 16 ವೀಳ್ಯದ ಎಲೆ, ಅಡಿಕೆಯನ್ನು ಇಡುತ್ತಾರೆ. ಇದರೊಂದಿಗೆ ದೇವಿಗೆ ನಿಮ್ಮ ಇಷ್ಟದಂತೆ ಅಲಂಕಾರ ಮಾಡಬಹುದು. ನಮ್ಮ ಮನೆಯಲ್ಲಿ ಮಂಗಳಗೌರಿ ಪೂಜೆ ಮಾಡಿರುವ ಫೋಟೋ ಕೆಳಗಿದೆ ನೋಡಿ.
ಶ್ರೀ ಮಂಗಳಗೌರಿ ವ್ರತ

ಕಲಶ,ಕೊಬ್ಬರಿಯಲ್ಲಿ ಮೂಡಿರುವ ಗೌರಿ ದೇವಿ
ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕೊಬ್ಬರಿ ಗಿಟುಕು, ರವಿಕೆ ಬಟ್ಟೆಗಳು, ಕಲಶ, ಕನ್ನಡಿ, ಮರದ ಜೊತೆ ಬಾಗಿನ, ಹತ್ತಿ ಎಳೆ, ಬಳೆ, ಬಿಚ್ಚೂಲೆ, ತಂಬಿಟ್ಟಿನ ಆರತಿ ಬೇಕಾಗುತ್ತೆ.ಮೊದಲು ಗಣಪತಿ ಪೂಜೆ ಮಾಡಿ ನಂತರ ಮಂಗಳಗೌರಿ ಪೂಜೆ ಮಾಡಬೇಕು. ಗೌರಿಗೆ 16 ಹಿಡಿ 16 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ ಹೆಸರುಬೇಳೆ ಪಾಯಸ, ಹುಗ್ಗಿ ಮಾಡುತ್ತಾರೆ. ಕೊನೆಯಲ್ಲಿ ತಂಬಿಟ್ಟಿನಲ್ಲಿ 16 ದೀಪದ ಆರತಿ ಮಾಡಬೇಕು. ತಂಬಿಟ್ಟು ಮಾಡುವ ವಿಧಾನ ಇಲ್ಲಿದೆ.ಈ ದೀಪದಲ್ಲಿ ವಿಳ್ಯದ ಎಲೆಯನ್ನು ಹಿಡಿದು, ಕಪ್ಪು(ಕಾಡಿಗೆ) ಹಿಡಿಯಬೇಕು. ಇದನ್ನು ಮಂಗಳಗೌರಿಗೆ ಹಚ್ಚಿ, ನೀವು ಕಣ್ಣಿಗೆ ಹಚ್ಚಿಕೊಳ್ಳಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆ ಆದ ಮೇಲೆ ಕೊಬ್ಬರಿಯಲ್ಲಿ ಮಾಡಿರುವ ದೇವಿಯನ್ನು ಹಾಗೆ ಇಟ್ಟುಕೊಳ್ಳಿ. ಅದೇ ಕೊಬ್ಬರಿಯನ್ನು ನಾಲ್ಕು ವಾರವೂ ಇಟ್ಟು ಪೂಜೆ ಮಾಡಿ, ಕೊನೆಯ ವಾರ ಇದನ್ನು ಬಾಗಿನದಲ್ಲಿ ಇಟ್ಟು ಕೊಡಿ.


ತಂಬಿಟ್ಟಿನ ಆರತಿ
ಪೂಜೆ ಮಂತ್ರಗಳನ್ನು ಪುಸ್ತಕದಿಂದ ಓದಿಕೊಳ್ಳಬಹುದು. ಈಗ ಪೂಜಾ ವಿಧಾನದ ಕ್ಯಾಸೆಟ್ /ಸಿಡಿ ಸಿಗುವುದರಿಂದ ಪೂಜೆ ಮಾಡುವುದು ಇನ್ನು ಸರಳಗೊಂಡಿದೆ. ಪೂಜಾ ವಿಧಾನದ ಕ್ಯಾಸೆಟ್ ಅಂದ ಕೂಡಲೇ ಮನ್ನಸ್ಸಿಗೆ ಬರುವ ಹೆಸರು ವೇದ ಬ್ರಹ್ಮ ಶ್ರೀ ಗಣಪತಿ ಶಾಸ್ತ್ರಿಗಳು. ಇವರು ದೊಡ್ಡ ಧ್ವನಿಯಲ್ಲಿ ಸ್ಪಷ್ಟವಾಗಿ ಮಂತ್ರಗಳನ್ನು ಹೇಳಿದ್ದಾರೆ. ಇವರ ಕ್ಯಾಸೆಟ್ ಗಳು ಬಹಳ ಜನಪ್ರಿಯವಾಗಿರುವುದು ಆಶ್ಚರ್ಯವೇನಿಲ್ಲ.

ಮಂಗಳಗೌರಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
1.Mangala Gowri Vratha + Kathe Audio Link (updated Aug 2018)
2.Mangala Gowri Vratha + Kathe Audio Link (esnips)

ಮಂಗಳ ಗೌರಿ ವ್ರತ ಕಥೆ ಇಲ್ಲಿ ಓದ ಬಹುದು (kannada wikisource)

ಇದರಿಂದ ನೀವು ಪೂಜೆ ಮಾಡುವುದು ಸುಲಭವಾಯಿತು ಅಲ್ಲವೇ :)

ಪ್ರತಿ ವರ್ಷ ಕೊನೆಯ ವಾರದ ಪೂಜೆಗೆ ಮರದ ಜೊತೆ ಬಾಗಿನ ಇಟ್ಟುಕೊಳ್ಳಬೇಕು. ಮರದ ಒಳಗೆ 4 ತರಹ ಬೇಳೆಗಳು,ಅಕ್ಕಿ,ಉಪ್ಪು, ರವೆ, ಬೆಲ್ಲ, ತೆಂಗಿನಕಾಯಿ, ಜೊತೆಗೆ ಪೂಜೆ ಮಾಡಿದ ಕೊಬ್ಬರಿ ಗಿಟುಕು, 16 ಎಳೆ ಹತ್ತಿ ಹಾರವನ್ನು ಇಡಬೇಕು. ಇದನ್ನು ನಿಮ್ಮ ತಾಯಿಗೆ ಬಾಗಿನ ಕೊಡಬೇಕು. ಹೀಗೆ 5 ವರ್ಷ ವ್ರತ ಮಾಡಿ ಉದ್ಯಪನೆ ಮಾಡಬೇಕು. ಐದನೇ ವರ್ಷ ಪೂಜೆಗೆ ಉಪಯೋಗಿಸಿದ ಕಳಶದ ಪಾತ್ರೆಯನ್ನು ಮರದ ಬಾಗಿನದ ಜೊತೆ ತಾಯಿಗೆ ಕೊಡಬೇಕು.ಮೊರದ ಜೊತೆ ಬಾಗಿನದ ಬಗ್ಗೆ ವಿವರ ಇಲ್ಲಿದೆ.

ಮಂಗಳಗೌರಿಯು ಎಲ್ಲರಿಗೂ ಮಂಗಳವನ್ನು ಮಾಡಲಿ.

ದೇವಿಯ ಹಾಡು/ ಸ್ತೋತ್ರಗಳು:
ಲಲಿತ ಅಷ್ಟೋತ್ತರ
ಲಲಿತ ಸಹಸ್ರನಾಮ
ಮಹಿಷಾಸುರ ಮರ್ದಿನೀ ಸ್ತೋತ್ರ
ದುರ್ಗಾ ಪಂಚರತ್ನ
ಸೌಂದರ್ಯ ಲಹರಿ
ಲಲಿತ ಪಂಚರತ್ನ
ದೇವಿ ನವರತ್ನ ಮಾಲಿಕಾ ಸ್ತೋತ್ರ


Link to all Devi Stotras

Link to all Devi Songs

July 28, 2008

Bheemana Amavasya / Jyothir Bheemeshwara Vrata / ಭೀಮನ ಅಮಾವಾಸ್ಯೆ / ಭೀಮನ ಅಮಾವಾಸ್ಯ ಹಬ್ಬ / ಶ್ರೀ ಜ್ಯೋತಿರ್ಭೀಮೇಶ್ವರ ವ್ರತ

ಸಾಮಾನ್ಯವಾಗಿ ಭೀಮನ ಅಮಾವಾಸ್ಯೆ / ಗಂಡನ ಪೂಜೆ ಅಂತ ಕರೆಯುತ್ತಾರೆ. ಈ ವ್ರತವನ್ನು ಆಷಾಢ ಮಾಸದ ಕೃಷ್ಣ ಪಕ್ಷದ ಅಮಾವಾಸ್ಯೆ ದಿನ ಆಚರಿಸಬೇಕು. ಹೆಣ್ಣು ಮಕ್ಕಳು ಮದುವೆಯಾದ ನಂತರ ಒಂಭತ್ತು ವರ್ಷ ಈ ವ್ರತ ಮಾಡುವ ಪದ್ಧತಿ ಇದೆ. ಒಂದು ತಟ್ಟೆಯಲ್ಲಿ ಧಾನ್ಯ ರಾಶಿ (ಅಕ್ಕಿ) ಹಾಕಿ , ಅದರ ಮೇಲೆ 2 ದೀಪದ ಕಂಭ ಇಡಬೇಕು. ತುಪ್ಪ ಹಾಕಿ ದೀಪ ಹಚ್ಚಬೇಕು . ಈ ದೀಪಸ್ತಂಭದಲ್ಲಿ ಈಶ್ವರ ಪಾರ್ವತಿಯನ್ನು ಆವಾಹನೆ ಮಾಡಿ ಪೂಜೆ ಮಾಡಬೇಕು . ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ಗೌರಿ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಕೈಗೆ ಕಟ್ಟಿಕೊಳ್ಳಬೇಕು. ಮೊದಲು ಗಣಪತಿ ಪೂಜೆ ಮಾಡಿ ನಂತರ ಭೀಮೆಶ್ವರನ ಪೂಜೆ ಮಾಡಬೇಕು .ಗಣಪತಿ ಅಷ್ಟೋತ್ತರ ಇಲ್ಲಿದೆ. ಶಿವ ಅಷ್ಟೋತ್ತರ ಇಲ್ಲಿದೆ. ನೈವೇದ್ಯಕ್ಕೆ 9 ಕರಿಗಡುಬು ಮಾಡಿಕೊಳ್ಳಬೇಕು.
ನಮ್ಮ ಮನೆಯಲ್ಲಿ ಜ್ಯೋತಿರ್ಭೀಮೇಶ್ವರನ ಪೂಜೆ

ಈ ಹಬ್ಬದ ಇನ್ನೊಂದು ವಿಶೇಷತೆ ಭಂಡಾರ . (ಭಂಡಾರ ಅಂದರೆ ನಿಧಿ, ಸಂಪತ್ತು, ಐಶ್ವರ್ಯ ಎಂದರ್ಥ) ಈ ಭಂಡಾರವನ್ನು ಕರಿಗಡುಬು (ಮೈದಾ)ಹಿಟ್ಟಿನಿಂದ ಕೆಳಗೆ ಚಿತ್ರದಲ್ಲಿ ಇರುವಂತೆ ಮಾಡಿಕೊಳ್ಳಬಹುದು. ಮಾಡುವಾಗ ಇದರೊಳಗೆ ದುಡ್ಡು/ನಾಣ್ಯವನ್ನು ಇಡಬೇಕು. ಇದನ್ನು ಹೊಸ್ತಿಲ ಮೇಲೆ ಇಟ್ಟು ಪೂಜೆ ಮಾಡಬೇಕು. ಅಣ್ಣ /ತಮ್ಮ ಇದನ್ನು ಒಡೆಯುತ್ತಾರೆ . ಅವರಿಗೆ ಆರತಿ ಮಾಡಿ, ಒಳಗೆ ಇರುವ ದುಡ್ಡಿನ ಜೊತೆಗೆ ಉಡುಗೊರೆ ಕೊಡಬೇಕು.

ಭಂಡಾರ


ಭೀಮನ ಅಮಾವಾಸ್ಯೆ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:

Bheemana Amavasya Vrata + Kathe Audio Link


ಕ್ರಮವಾಗಿ ಪೂಜೆ ಮಾಡಿ ನಂತರ ವ್ರತ ಕಥಾ ಶ್ರವಣ ಮಾಡಬೇಕು. ವ್ರತ ಕಥಾ ಸಾರಾಂಶ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


Shiva Stotras

Devotional Songs on Shiva

ಜ್ಯೋತಿರ್ಭೀಮೇಶ್ವರನು ಎಲ್ಲರಿಗೂ ಸೌಭಾಗ್ಯ, ಸುಖ ಸಂತೋಷಗಳನ್ನು ಅನುಗ್ರಹಿಸಲಿ :)

June 28, 2008

Lalitha Ashtottara in Kannada / ಶ್ರೀ ಲಲಿತ ಅಷ್ಟೋತ್ತರ

ಶ್ರೀ ಲಲಿತ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು :

Audio Link by Bombay Sisters
Blog Widget by LinkWithin