Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label xKau. Show all posts
Showing posts with label xKau. Show all posts

June 17, 2010

Shlokas for Kids / Everyday Shlokas in Kannada / ಮಕ್ಕಳಿಗೆ ಶ್ಲೋಕಗಳು


ನಮ್ಮೆಲರಿಗೂ ಹಿಂದೂ ಧರ್ಮದ ಬಗ್ಗೆ ಬಹಳ ಗೌರವ, ಅಭಿಮಾನ ಇದೆ. ನಮ್ಮ ಸಂಸ್ಕೃತಿ, ಸಂಪ್ರದಾಯ, ಪರಂಪರೆ ಬಗ್ಗೆ ನಮ್ಮ ಮಕ್ಕಳಿಗೂ ಆಸಕ್ತಿ, ಅಭಿರುಚಿ ಹುಟ್ಟಿ, ಅವರೂ ಈ ಸಂಪ್ರದಾಯಗಳನ್ನು ಮುಂದುವರೆಸಲಿ ಎಂದು ಎಲ್ಲ ತಂದೆ ತಾಯಿಯರಿಗೂ ಆಸೆ ಇರುವುದು ಸಹಜ. ಮಕ್ಕಳು ಸಹಜವಾಗಿ ಕುತೂಹಲದಿಂದ ಎಲ್ಲವನ್ನು ಸೂಕ್ಷ್ಮವಾಗಿ ಗಮನಿಸುತ್ತಾರೆ, ಹೊಸ ವಿಷಯಗಳನ್ನು ತಿಳಿದುಕೊಳ್ಳಲು ಉತ್ಸುಕರಾಗಿರುತ್ತಾರೆ, ಯಾವುದೇ ಮಾಹಿತಿಯನ್ನು ಬೇಗ ಗ್ರಹಿಸುತ್ತಾರೆ. ಚಿಕ್ಕ ವಯಸ್ಸಿನಿಂದಲೇ ಪಾಠ, ವಿದ್ಯೆ ಜೊತೆಗೆ ನಮ್ಮ ಹಿಂದೂ ಸಂಸ್ಕೃತಿಯ ಬಗ್ಗೆಯೂ ಅವರಿಗೆ ತಿಳುವಳಿಕೆ ಕೊಡುವುದು ಉಚಿತ ಎಂದು ಅನಿಸುತ್ತದೆ. ಮಕ್ಕಳಿಗೆ ಹೇಳಿ ಮಾಡಿಸಿದಂತೆ ಅನೇಕ ಚಿಕ್ಕ ಸ್ತೋತ್ರ,ಶ್ಲೋಕಗಳು ಇವೆ. ಸಾಮಾನ್ಯವಾಗಿ ಎಲ್ಲರಿಗೂ ತಿಳಿದಿರುವ ಶ್ಲೋಕಗಳ ಪಟ್ಟಿಯನ್ನು ಕೆಳಗೆ ಮಾಡಿದ್ದೀನಿ.ದೊಡ್ಡದಾಗಿ ಮಾಡಲು ಕೆಳಗಿನ ಚಿತ್ರದ ಮೇಲೆ ಕ್ಲಿಕ್ ಮಾಡಿ.



Interactive Websites to learn slokas:
1.Slokas Online
2.Hindu Kids
3.Slokaskids

Audio Links for Shlokas:

3.Collection of 25 Gayatris
4.Shlokas by Bombay Sisters
5.Daily Shlokas by S.P.Balsubramanyam
6.Prarthana Slokas - Vol 1
7.Prarthana Slokas - Vol 2

8.Divine Chants by Pallavi Arun
9.Daily Prayers by T.S.Ranganathan Vol 1
10.Daily Prayers by T.S.Ranganathan Vol 2
11.Daily Prayers by T.S.Ranganathan Vol 3
12.Daily Prayers by T.S.Ranganathan Vol 4


13.Prerana - Slokas for Children
14.Makkala Panchanga
15.Sumiran by Lata Mangeshkar
16.Mantras for Young Children


ಪುಟಾಣಿಗಳಿಗೆ ಶ್ಲೋಕಗಳನ್ನು ಯಶಸ್ವಿಯಾಗಿ ಹೇಳಿಕೊಡಲು ಪೋಷಕರಿಗೆ ನನ್ನ ಶುಭ ಹಾರೈಕೆಗಳು :)

May 8, 2010

Purusha Sukta in Kannada / ಪುರುಷ ಸೂಕ್ತ

ಪುರುಷ ಸೂಕ್ತ ವೇದದಲ್ಲಿ ಇರುವ ಮಂತ್ರ. ಇದರಲ್ಲಿ ೨೪ ಪಂಕ್ತಿಗಳಿವೆ . ಮೊದಲ ೧೮ ನ್ನು ಪೂರ್ವ ನಾರಾಯಣ ಎಂದೂ, ಕೊನೆಯ ೬ ಪೊಂಕ್ತಿಗಳನ್ನು ಉತ್ತರ ನಾರಾಯಣ ಎಂದೂ ಕರೆಯುತ್ತಾರೆ. ಇದರ ಅರ್ಥವನ್ನು ಬೇರೆ ಬೇರೆ ತರಹಅನುವಾದಿಸಿದ್ದಾರೆ. ಅದನ್ನು ಇಲ್ಲಿ, ಇಲ್ಲಿ, ಇಲ್ಲಿ ಮತ್ತು ಇಲ್ಲಿ ಓದಬಹುದು.

ಪುರುಷ ಸೂಕ್ತ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




1.Audio Link by Y N Sharma

2.Audio Link by NS Prakash Rao

3. Another audio link below

March 13, 2010

Sri Suktam in Kannada / ಶ್ರೀ ಸೂಕ್ತಂ

ಶ್ರೀ ಸೂಕ್ತ ಲಕ್ಷ್ಮೀ ದೇವಿಯ ಮೇಲಿನ ಸ್ತೋತ್ರ. ಈ ಸ್ತೋತ್ರವನ್ನು ಪಠಿಸಿದರೆ ಲಕ್ಷ್ಮಿಯು ಐಶ್ವರ್ಯ, ಅಭಿವೃದ್ಧಿ, ನೆಮ್ಮದಿ, ಸಂತೋಷ, ಸಕಲ ಸಂಪತ್ತನ್ನು ಅನುಗ್ರಹಿಸುತ್ತಾಳೆ ಎಂಬ ನಂಬಿಕೆ ಇದೆ.

ಶ್ರೀ ಸೂಕ್ತ ಕನ್ನಡದಲ್ಲಿದೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.




1. Audio Link by Challakere Brothers

2. Audio Link by Anantha Kulkarni (Album Link)

3. Audio Link by Thiagarajan (song7)

4. Audio Link by Shweta Pandit below

February 27, 2010

Aditya Hrudayam in Kannada / ಆದಿತ್ಯ ಹೃದಯಮ್

ಆದಿತ್ಯ ಹೃದಯ ಸ್ತೋತ್ರ ಸೂರ್ಯನ ಸ್ತೋತ್ರ. ಸ್ತೋತ್ರವು ರಾಮಾಯಣದ ಯುದ್ಧ ಕಾಂಡದಲ್ಲಿ ಬರುತ್ತದೆ. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ಋಷಿ ಅಗಸ್ತ್ಯರು ರಾಮನಿಗೆ ಸ್ತೋತ್ರವನ್ನು ಪಠಿಸುತ್ತಾರೆ. ಸ್ತೋತ್ರದಿಂದ ಸೂರ್ಯನನ್ನು ಪ್ರಾರ್ಥನೆ ಮಾಡಿ, ಅವನಿಂದ ಅಪಾರ ಶಕ್ತಿ, ಬಲ ಪಡೆದು ಶತ್ರುವನ್ನು ಸೋಲಿಸುತ್ತಾರೆ.
ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio link by S.P.Balasubramanyam

2. Audio link by Purushottama Sai (song starts at 2.00 minutes)

3. Audio by Sulamagala Sisters below




4.Audio by another artist(prapatti.com)


November 20, 2009

Subramanya (Subbaraya) Shashti / ಸುಬ್ರಹ್ಮಣ್ಯ ಷಷ್ಠಿ

ಸುಬ್ರಹ್ಮಣ್ಯ ಷಷ್ಠಿ / ಸುಬ್ಬರಾಯ ಷಷ್ಠಿ ಹಬ್ಬವನ್ನು ಮಾರ್ಗಶಿರ ಮಾಸದ ಶುಕ್ಲ ಪಕ್ಷದ ಷಷ್ಠಿ ದಿನ ಆಚರಿಸುತ್ತಾರೆ. ಈ ದಿನ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಬೆಳ್ಳಿ ನಾಗಪ್ಪನ ವಿಗ್ರಹ, ಸುಬ್ರಮಣ್ಯ ಸ್ವಾಮಿಯ ಪಟ ಇಟ್ಟು ಪೂಜೆ ಮಾಡಿ. ಮೊದಲು ಗಣಪತಿಗೆ ಪೂಜೆ ಮಾಡಬೇಕು. ನಂತರ ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು.ಪೂಜಾ ವಿಧಾನ ಇಲ್ಲಿದೆ. ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.

ನೈವೇದ್ಯಕ್ಕೆ ಯಾವುದಾದರು ಸಿಹಿ ತಿಂಡಿ ಮಾಡಿಕೊಳ್ಳಿ. ಪೂಜೆಯ ನಂತರ ಉಪನಯನ ಆಗಿರುವ ವಟುವನ್ನು ಮನೆಗೆ ಕರೆದು ಭಕ್ಷ್ಯ ಭೋಜನ ಹಾಕಿ. ಈ ಬ್ರಹ್ಮಚಾರಿ ಬಾಲಕ ಶ್ರೀ ಸುಬ್ರಮಣ್ಯ ಸ್ವಾಮಿಯ ಸ್ವರೂಪ ಎಂದು ಭಾವಿಸಿ ಅವನಿಗೆ ಉಪಚಾರ ಮಾಡಿ. ಊಟದ ನಂತರ ಅವನಿಗೆ ಯಥೇಚ್ಚವಾಗಿ ಉಡುಗೊರೆ, ದಕ್ಷಿಣೆ, ದಾನ ಕೊಟ್ಟು ಸಂತೃಪ್ತಿ ಪಡಿಸಬೇಕು. ನಂತರ ಮನೆಯವರೆಲ್ಲ ಊಟ ಮಾಡಬೇಕು.

ಈ ದಿನ ಸುಬ್ರಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನನ್ನು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.

Useful Links:
Subramanya Ashottara
Subramanya Stotram
Subrahmanya Ashtaka
Subramanya Bhujangam


Subrahmanya Sahasranamavali by lakshmipathi(song 11)


  Subramanya Songs by VidyaBhushana:
Bandu Nodiro Shree Subramanya
Subbaraya Shubhakaya 
Subrahmanya Suragraganya 
Subramanya Subramanya

September 10, 2009

Sri Lalita Trishati Stotra in Kannada / ಶ್ರೀ ಲಲಿತ ತ್ರಿಶತಿ ಸ್ತೋತ್ರ

ನವರಾತ್ರಿ ಹತ್ತಿರ ಬರುತ್ತಿದೆ, ಹಾಗಾಗಿ ಈ ತಿಂಗಳು ದೇವಿಯ ಸ್ತೋತ್ರಗಳನ್ನು ಪ್ರಕಟಿಸುತ್ತೀನಿ. ಪುರಾಣಗಳಲ್ಲಿ 18 ನೇ ಪುರಾಣ ಬ್ರಹ್ಮಾಂಡ ಪುರಾಣ. ಈ ಪುರಾಣದಲ್ಲಿ ಲಲಿತ ದೇವಿಯನ್ನು ಅತಿಶಯವಾಗಿ ಹೊಗಳಿ, ಸ್ತುತಿಸಲಾಗಿದೆ. ಇದರಲ್ಲಿ ಲಲಿತೊಪಾಖ್ಯಾನ (ಉಪಾಖ್ಯಾನ - ಉಪ ಕಥೆ ; ಲಲಿತಾ ದೇವಿಯ ಕಥೆ), ಲಲಿತಾ ಸಹಸ್ರನಾಮ, ಲಲಿತಾ ತ್ರಿಶತಿ ಸ್ತೋತ್ರಗಳಿವೆ. ಇದು ಹಯಗ್ರೀವ (ವಿಷ್ಣುವಿನ ಅವತಾರ) ಮತ್ತು ಅಗಸ್ತ್ಯ ಷಿಗಳ ಮಧ್ಯೆ ನಡೆದ ಸಂವಾದ ಎಂದು ಹೇಳುತ್ತಾರೆ. ತ್ರಿಶತಿ ಅಂದರೆ 300. ಈ ಲಲಿತಾ ತ್ರಿಶತಿ ಸ್ತೋತ್ರದಲ್ಲಿ ದೇವಿಯ 300 ನಾಮಗಳಿವೆ. ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ. ೪ ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
pages
1-4


Lalitha Trishathi audio:

1. Audio Link by T.S.Ranganathan below


2. Audio Link by S.Janaki (recited as NamavaLi )

3. Audio Link - Part - 1, Part - 2 ( recited as Namavali)

ಲಲಿತಾ ದೇವಿಯು ಎಲ್ಲರನ್ನು ಹರಸಿ ಕಾಪಾಡಲಿ:)


Related Link:
Lalita Sahasranama

August 20, 2009

All Devi Stotras & Songs / ದೇವಿ ಸ್ತೋತ್ರಗಳು ಹಾಡುಗಳು




Listen to Devi Stotras Playlist - top of the sidebar on right


ಗೌರಿ ಹಬ್ಬ, ನಂತರ ನವರಾತ್ರಿ ಬರುತ್ತಾ ಇದೆ. ಅದಕ್ಕಾಗಿ ದೇವಿಯ ಎಲ್ಲ ಸ್ತೋತ್ರಗಳು, ಹಾಡುಗಳನ್ನು ಒಂದು ಕಡೆ ಸಂಗ್ರಹಿಸಿದ್ದೀನಿ.
List of All Devi Stotras & Songs . Click on the name to go to the respective link.



Stotras (lyrics + Audio)Kanakadhara Stotra
Durga AshtottaraMookambika Ashtakam
Tulasi AshtottaraDevi Stotras in English
Durga Kavachamaddnewstotra
RajaRajeshwari ashtakaaddnew
Durga Ashtottara ShatanamaSongs & Audio Links
Lalitha AshtottaraSongs on Lakshmi(with lyrics)
Gowri AshtottaraSongs on devi(with lyrics)
Saraswati AshtottaraSongs on Saraswathi(with lyrics)
Saraswati StotrasDurga Prarthana - Vol 1
Lakshmi AshtottaraDurga Prarthana - Vol 2
Mahalakshmi AshtakamDevi Sookta Maala
Devi NavaratnamalikaDevi Stotra Maala
Lalita SahasranamaLakshmi Sahasranama
Soundarya LahariLakshmi Shobane
Mahishasura Mardini StotraPooja sankalpam (Devi Songs)
Lalita Devi PancharatnaPooja Phalam (Devi Songs)
Durga Sapta Shloki StotraAyigiri Nandini (Devi Songs)
Durga PancharatnaDevi Mahatma - Vol 1
Devi SuktamDevi Mahatma - Vol 2
Lalita Trishati StotraDevi Mahatma - Vol 3
Ashtalakshmi StotraDurga Suprabhatam
Sri Suktam
Bhavani Ashtakam
Saraswati Dwadashanama
Devi Khadgamala Stotra

August 16, 2009

Ganesha Sahasranama in Kannada / ಗಣೇಶ ಸಹಸ್ರನಾಮ ಸ್ತೋತ್ರ

ಗಣೇಶ ಚತುರ್ಥಿ ಬರುತ್ತಾ ಇದೆ. ಎಲ್ಲರ ಮನೆಯಲ್ಲೂ ಸಡಗರದಿಂದ ತಯಾರಿ ಆಗುತ್ತ ಇದೆ ಅಂತ ಕಾಣುತ್ತೆ. ಗಣೇಶ ಇನ್ನೊಂದು ಸ್ತೋತ್ರ, ಗಣೇಶ ಸಹಸ್ರನಾಮ ಇಲ್ಲಿದೆ. ಇದು ಲಲಿತ/ವಿಷ್ಣು ಸಹಸ್ರನಾಮದಷ್ಟು ಜನಪ್ರಿಯವಿಲ್ಲ. ಕೆಲವರು ಇದನ್ನ ಕೇಳಿಯೇ ಇಲ್ಲದಿರಬಹುದು. ಹಾಗಾಗಿ ಇದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಣ ಅಂತ ಇಲ್ಲಿ ಪ್ರಕಟಿಸಿದ್ದೀನಿ.
ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
Pages 1 - 4

Pages 5 - 8

Audio of Ganesha Sahasranamam below:

1.AudioLink - N.S.Prakash Rao

2.AudioLink - P.B.Srinivas

3.AudioLink - Sri VidyaBhushana

August 3, 2009

Soundarya Lahari Stotra in Kannada / ಸೌಂದರ್ಯ ಲಹರಿ ಸ್ತೋತ್ರ

ಸೌಂದರ್ಯ ಲಹರಿ ಸ್ತೋತ್ರವನ್ನು ಜಗದ್ಗುರು ಶ್ರೀ ಶಂಕರಾಚಾರ್ಯರು ರಚಿಸಿದ್ದಾರೆ. ಮಂತ್ರಗಳ ಪೈಕಿ ಇದು ಪ್ರಮುಖವಾದುದು. ಈ ಸ್ತೋತ್ರದಲ್ಲಿ ೧೦೦ ಪದ್ಯ/ಪಂಕ್ತಿಗಳಿವೆ (100 verses) ೧ - ೪೧ ಪದ್ಯಗಳನ್ನು ಆನಂದ ಲಹರಿ ಎಂದು ಕರೆಯುತ್ತಾರೆ. ೪೨ - ೧೦೦ ಪದ್ಯಗಳನ್ನು ಸೌಂದರ್ಯ ಲಹರಿ ಎನ್ನುತ್ತಾರೆ. ಲಹರಿ ಎಂದರೆ ಅಲೆ/ತೆರೆ ಎಂದರ್ಥ. ಆನಂದ ಲಹರಿ ಎಂದರೆ ಆನಂದದ ಅಲೆಗಳು, ಆನಂದ ನೀಡುವಂತದ್ದು. ಹೆಸರೇ ಸೂಚಿಸುವಂತೆ ಈ ಸ್ತೋತ್ರದಲ್ಲಿ ದೇವಿಯ ಸೌಂದರ್ಯವನ್ನು ವರ್ಣಿಸಿದ್ದಾರೆ. ಈ ಸ್ತೋತ್ರವನ್ನು ಪಠಿಸಿದರೆ ಆದಿಶಕ್ತಿಯು ನಿಮ್ಮ ಎಲ್ಲ ಅಭಿಲಾಷೆಗಳನ್ನು ಪೂರೈಸುತ್ತಾಳೆ ಎಂಬ ನಂಬಿಕೆ. ಈ ಸ್ತೋತ್ರವನ್ನು 8 ಪುಟಗಳಲ್ಲಿ ಬರೆದಿದ್ದೀನಿ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Pages 1 - 4



Pages 5 - 8



Audio links by Various artists:

1.Audio Link - Bombay Sisters(MI)

2.Audio Link - M.L.Vasantha Kumari(MI)

3.Audio Link - Bangalore Sisters(KA)

4.Audio Link - Mambalam Sisters[RG]


Meaning of Saundarya Lahari Stotram


ಆದಿಶಕ್ತಿಯು ಎಲ್ಲರನ್ನು ಕಾಪಾಡಲಿ :)

July 27, 2009

Varamahalakshmi Vrata / ವರಮಹಾಲಕ್ಷ್ಮಿ ವ್ರತ


ವರಮಹಾಲಕ್ಷ್ಮಿ ವ್ರತ - ಹೆಸರೇ ಸೂಚಿಸುವಂತೆ ವರಗಳನ್ನು ಕೊಡುವ ಲಕ್ಷ್ಮಿ ದೇವಿಯ ವ್ರತ ಇದು.ಈ ವ್ರತವನ್ನು ಶ್ರಾವಣ ಮಾಸದ ಶುಕ್ಲ ಪಕ್ಷದ ಶುಕ್ರವಾರ ಮಾಡುತ್ತಾರೆ. ಪೂರ್ಣಿಮೆಯ ಹಿಂದಿನ ಶುಕ್ರವಾರ ಮಾಡಬೇಕು. ಕೆಲವರ ಮನೆಯಲ್ಲಿ ವ್ರತ ಮಾಡುವ ಪದ್ಧತಿಗೆ ಇರುತ್ತೆ, ವ್ರತ ಮಾಡುವ ಪದ್ಧತಿ ಇಲ್ಲದಿದ್ದರೆ ಲಕ್ಷ್ಮಿ ದೇವಿಗೆ ಪೂಜೆ ಮಾಡಿ.

ದಿನ ಬೆಳಿಗ್ಗೆ ಎದ್ದು ಮಂಗಳ ಸ್ನಾನ ಮಾಡಬೇಕು. ವ್ರತ ಮಾಡುವವರು ಕಲಶ ಸ್ಥಾಪನೆ ಮಾಡಬೇಕು. ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಬಾಳೆ ಕಂದು, ಮಾವಿನ ಎಲೆಗಳಿಂದ ಸಿಂಗರಿಸಿ. ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು/ಅಕ್ಕಿ ಹಾಕಿ, ಜೊತೆಗೆ ಅರಿಶಿನದ ಗೊನೆ, ಅಡಿಕೆ, ಬೆಳ್ಳಿ ನಾಣ್ಯ / ಯಾವುದೇ ನಾಣ್ಯ(coin) ಹಾಕಿ.ಅದರ ಮೇಲೆ ಅರಿಶಿನ ಕುಂಕುಮ ಸವರಿದ ತೆಂಗಿನಕಾಯಿ ಇಟ್ಟು, ಇದರ ಮೇಲೆ ಮುಖದ ಆಕಾರದ ಚಿತ್ರ ಬರೆಯಬಹುದು ಅಥವಾ ಲಕ್ಷ್ಮಿ ದೇವಿಯ ಬೆಳ್ಳಿಯ ಮುಖವಾಡ ಇದ್ದರೆ ಅದನ್ನು ಈ ತೆಂಗಿನಕಾಯಿಗೆ ಜೋಡಿಸಿ. ಕಳಶದ ಬಾಯಿಗೆ ವೀಳ್ಯದ ಎಲೆ , ಮಾವಿನ ಎಲೆಗಳನ್ನು ಇಡಬೇಕು. ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಈ ಕಲಶಕ್ಕೆ ಹೊಸ ರವಿಕೆ ಬಟ್ಟೆ ಅಥವಾ ಸೀರೆ ಉಡಿಸಿ , ವಡವೆ ಹಾಕಿ ಅಲಂಕಾರ ಮಾಡಬಹುದು. ಈ ಕಲಶಕ್ಕೆ ಶ್ರೀ ಲಕ್ಷ್ಮಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ವರಮಹಾಲಕ್ಷ್ಮಿ ಪೂಜೆಯ ಚಿತ್ರ ಕೆಳಗಿದೆ.

ವರಮಹಾಲಕ್ಷ್ಮಿ ಕಲಶ ಸ್ಥಾಪನೆ , ಪೂಜೆ (karnataka.com)
ಷೋಡಶೋಪಚಾರದಿಂದ ಮಾಡುವ ಪೂಜಾ ವಿಧಿ ಇಲ್ಲಿದೆ. ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, 9 ಗಂಟಿನ ದಾರ ಇಟ್ಟು ಪೂಜೆ ಮಾಡಬೇಕು, ಪೂಜೆ ನಂತರ ಈ ದಾರವನ್ನು ಕೈಗೆ ಕಟ್ಟಿಕೊಳ್ಳಬೇಕು. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಪೂಜೆ ಮಾಡಿ ನಂತರ ವರಮಹಾಲಕ್ಷ್ಮಿ ದೇವಿಗೆ ಪೂಜೆ ಮಾಡಿ.ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಸುಮಂಗಲಿಯರಿಗೆ ಅರಿಶಿನ ಕುಂಕುಮ ಕೊಡಬೇಕು.
ವರಮಹಾಲಕ್ಷ್ಮಿ ವ್ರತ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:
ವರಮಹಾಲಕ್ಷ್ಮಿ ವ್ರತ ಕಥೆ ಇಲ್ಲಿ ಓದಬಹುದು (thatskannada)

ಪೂಜೆಯ ಮಾರನೆಯ ದಿನ ಶನಿವಾರ, ದೇವರ ವಿಸರ್ಜನೆ ಮಾಡಿ, ನಂತರ ಕಲಶ ಪಾತ್ರೆಯ ಅಕ್ಕಿಯನ್ನು ಅಡಿಗೆಯಲ್ಲಿ ಉಪಯೋಗಿಸಿ, ಕಲಶಕ್ಕೆ ಇಟ್ಟ ತೆಂಗಿನಕಾಯಿಯಿಂದ ಸಿಹಿ ತಿಂಡಿಯನ್ನು ಮಾಡಿ. ವ್ರತದ ದಿನ ಪೂಜೆ ಮಾಡಲು ಆಗದಿದ್ದರೆ, ಶ್ರಾವಣದಲ್ಲಿ ಇನ್ನೊಂದು ಶುಕ್ರವಾರ ಈ ವ್ರತ ಮಾಡಬಹುದು.
ವರಮಹಾಲಕ್ಷ್ಮಿಯು ನಮ್ಮೆಲ್ಲರನ್ನು ಅನುಗ್ರಹಿಸಿ ಕಾಪಾಡಲಿ :)
Useful Links:

Lakshmi Ashottara
Lakshmi Ashtakam

All Devi Stotras

Lakshmi Sahasranama

Get this widget | Track details |


Songs on Lakshmi Devi

July 20, 2009

Nagara Panchami / Panchami Habba / ನಾಗರ ಪಂಚಮಿ ಹಬ್ಬ

ನಾಗರ ಪಂಚಮಿ ಶ್ರಾವಣ ಮಾಸದ ಶುಕ್ಲ ಪಕ್ಷದ ಪಂಚಮಿ ದಿನ ಆಚರಿಸುತ್ತಾರೆ. ಈ ಹಬ್ಬವನ್ನು ಪಂಚಮಿ ಹಬ್ಬ, ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಈ ಹಬ್ಬದಲ್ಲಿ ನಾಗಪ್ಪ / ಸುಬ್ರಹ್ಮಣ್ಯ ಸ್ವಾಮಿಗೆ ಪೂಜೆ ನಡೆಯುತ್ತದೆ. ಈ ಹಬ್ಬವನ್ನು ಬಹಳ ನೇಮ, ನಿಷ್ಠೆಯಿಂದ ಆಚರಿಸುತ್ತಾರೆ.
ಬೆಳಿಗ್ಗೆ ಮಂಗಳ ಸ್ನಾನ ಮಾಡಬೇಕು. ಮಡಿ ಬಟ್ಟೆಗಳನ್ನು ತೊಟ್ಟು ಪೂಜೆ ಮಾಡಬೇಕು. ದೇವರ ಮನೆಯಲ್ಲಿ ಹುತ್ತದ ಮಣ್ಣಿನಿಂದ ಹಾವಿನ ಆಕಾರ ಮಾಡಿಇಟ್ಟುಕೊಳ್ಳಬಹುದು ಅಥವಾ ಬೆಳ್ಳಿ ನಾಗಪ್ಪನ ವಿಗ್ರಹ ಇಟ್ಟುಕೊಳ್ಳಬಹುದು. ಸಾಮಾನ್ಯವಾಗಿ ಎಲ್ಲರ ಮನೆಯಲ್ಲೂ ಕುಕ್ಕೆ ಸುಬ್ರಹ್ಮಣ್ಯ ಸ್ವಾಮಿಯ ಪಟ ಇದ್ದೇ ಇರುತ್ತೆ. ಇದನ್ನೂ ಜೊತೆಯಲ್ಲಿ ಇಟ್ಟು ಪೂಜೆ ಮಾಡಬಹುದು. ಕೆಲವರು ಹಾವಿನಾಕಾರದ ರಂಗೋಲಿಯನ್ನು ಬರೆಯುತ್ತಾರೆ. ನಾಗಪ್ಪನಿಗೆ ಹಾಲು, ನೀರಿನಿಂದ ತನಿ ಎರೆಯುತ್ತಾರೆ. ಸಾಮಾನ್ಯವಾಗಿ ತಾಳೆ(ಕೇದಿಗೆ) ಗಿಡದ ಎಲೆ/ಹೂವನ್ನು ಉಪಯೋಗಿಸಿ ತನಿ ಎರೆಯುತ್ತಾರೆ. ತಾಳೆ(ಕೇದಿಗೆ) ಗಿಡದ ಚಿತ್ರ ಕೆಳಗಿದೆ.(biological name: Pandanus fascicularis)
click on image to enlarge

ಮಂತ್ರಾಕ್ಷತೆ ಉಪಯೋಗಿಸುವುದಿಲ್ಲ . ಅದರ ಬದಲು ಅಕ್ಕಿ ಹಿಟ್ಟು, ಕಡಲೆ ಕಾಳು ಸೇರಿಸಿದ ಮಿಶ್ರಣ ಉಪಯೋಗಿಸುತ್ತಾರೆ.
ಶ್ರೀ ಸುಬ್ರಹ್ಮಣ್ಯ ಸ್ವಾಮಿಗೆ ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಸುಬ್ರಹ್ಮಣ್ಯ ಅಷ್ಟೋತ್ತರ ಇಲ್ಲಿದೆ.
ನೈವೇದ್ಯಕ್ಕೆ ಚಿಗಳಿ ( ಎಳ್ಳು ಮತ್ತು ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ತಂಬಿಟ್ಟು ( ಅಕ್ಕಿ, ಬೆಲ್ಲ ಸೇರಿಸಿ ಮಾಡುವ ಸಿಹಿ ತಿನಿಸು) ಮಾಡುತ್ತಾರೆ. ಪೂಜೆಯ ನಂತರ ದೇವರ ಮುಂದೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುತ್ತಾರೆ. ಅಣ್ಣ , ಅಕ್ಕನಿಗೆ ನಮಸ್ಕಾರ ಮಾಡಿ ಆಶೀರ್ವಾದ ಪಡೆಯುತ್ತಾರೆ.
ನಾಗರ ಪಂಚಮಿ ಹಬ್ಬದ ವಿಶೇಷತೆ ಒಡಹುಟ್ಟಿದವರಿಗೆ ಹಾಲು ತನಿ ಎರೆಯುವುದು. ಅಕ್ಕ, ತಂಗಿ, ಅಣ್ಣ ತಮ್ಮ ಒಬ್ಬರಿಗೊಬ್ಬರು ತನಿ ಎರೆಯುತ್ತಾರೆ. ಹಾಲನ್ನು ಹೊಟ್ಟೆ ಬೆನ್ನಿಗೆ ಸವರಿ , ಹೊಟ್ಟೆ ಬೆನ್ನು ತಂಪಾಗಿರಲಿ ಅಂತ ಹಾರೈಸುತ್ತಾರೆ. ಹೊಟ್ಟೆ ಎಂದರೆ - ಮುಂದೆ ಬರುವ ಪೀಳಿಗೆ, ಹೊಟ್ಟೆಯಲ್ಲಿ ಹುಟ್ಟುವ ಮಕ್ಕಳು ಎಂಬ ಸಂಕೇತ , ಬೆನ್ನು ಎಂದರೆ ಹಿಂದಿನಪೀಳಿಗೆ ಅಂದ್ರೆ ನಮ್ಮ ಹಿರಿಯರು ಎಂಬ ಸಂಕೇತ. ಒಡಹುಟ್ಟಿದವರು ಮತ್ತು ಅವರ ಮಕ್ಕಳು ಎಲ್ಲರು ಚೆನ್ನಾಗಿರಲಿ ಎಂದು ಹಾರೈಸುತ್ತಾರೆ. ಹೀಗಾಗಿ ಇದನ್ನು ಒಡಹುಟ್ಟಿದವರ ಹಬ್ಬ ಎಂದೂ ಕರೆಯುತ್ತಾರೆ. ಊಟಕ್ಕೆ ಕಾಯಿ ಕಡುಬು, ಉದ್ದಿನ ಕಡುಬು ಮಾಡುತ್ತಾರೆ. ನಾಗಪ್ಪನಿಗೆ ಘಾಟು ಆಗಬಾರದೆಂದು ಯಾವುದೇ ಕರಿದ ತಿಂಡಿ ಮಾಡುವುದಿಲ್ಲ, ಅಡಿಗೆಗೆ ಒಗ್ಗರಣೆ ಹಾಕುವುದಿಲ್ಲ.

ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ವಿಶೇಷ ಪೂಜೆ ನಡೆಯುತ್ತದೆ. ದೇವಸ್ಥಾನದಲ್ಲಿರುವ ನಾಗರ ಕಲ್ಲುಗಳಿಗೆ ಪೂಜೆ ಮಾಡುತ್ತಾರೆ. ಮನೆಯ ಹತ್ತಿರ ಹುತ್ತ ಇದ್ದರೆ, ಅದಕ್ಕೆ ಅರಿಶಿನ ಕುಂಕುಮ ಹಾಕಿ, ಹಾಲು ಎರೆಯುತ್ತಾರೆ. ಒಟ್ಟಿನಲ್ಲಿ ನಾಗಪ್ಪನಿಗೆ ಹಾಲೆರೆದು ಸಂತೃಪ್ತಿ ಪಡಿಸಬೇಕೆಂಬ ನಂಬಿಕೆ.
ಉತ್ತರ ಕರ್ನಾಟಕದಲ್ಲಿ ಈ ಹಬ್ಬವನ್ನು ಪಂಚಮಿ ಹಬ್ಬ ಎನ್ನುತ್ತಾರೆ. ಇದನ್ನು ಅದ್ಧೂರಿಯಿಂದ ಮಾಡುತ್ತಾರೆ. ೩ - ೫ ದಿನಗಳ ಹಬ್ಬ ನಡೆಸುತ್ತಾರೆ. ಹೊಸದಾಗಿ ಮದುವೆಯಾದ ಹೆಣ್ಣು ಮಗಳನ್ನು ಅಣ್ಣ/ತಮ್ಮ ಅತ್ತೆ ಮನೆಯಿಂದ ತವರು ಮನೆಗೆ ಕರೆದುಕೊಂಡು ಹೋಗಲು ಬರುತ್ತಾರೆ. ಇದೇ ಪದ್ಧತಿ ಬಗ್ಗೆ ಒಂದು ಜನಪ್ರಿಯವಾದ ಭಾವಗೀತೆ ಕೂಡ ಇದೆ. ಕವಿಯಾದ ಬೆಟಗೇರಿ ಕೃಷ್ಣ ಶರ್ಮ (ಆನಂದಕಂದರು) ರಚಿಸಿರುವ "ಪಂಚಮಿ ಹಬ್ಬಕ್ ಉಳಿದಾವು ದಿನ ನಾಕ ಅಣ್ಣ ಬರಲಿಲ್ಲ ಯಾಕೋ ಕರಿಯಾಕ " ಹಾಡನ್ನು ಇಲ್ಲಿ ಕೇಳಬಹುದು. ಹೆಣ್ಣು ಮಕ್ಕಳು ಪಂಚಮಿ ಹಬ್ಬವನ್ನು ತವರು ಮನೆಗೆ ಹೋಗಿ ಆಚರಿಸುತ್ತಾರೆ. ಒಡಹುಟ್ಟಿದವರಿಗೆ ಹಾಲು ಎರೆದು ಉಡುಗೊರೆ ಕೊಡುತ್ತಾರೆ. ಇದಕ್ಕೆ ಉಂಡಿ /ಉಂಡೆ ಹಬ್ಬ ಎಂದೂ ಹೆಸರು. ವಿವಿಧವಾದ ಉಂಡೆಗಳನ್ನು ಮಾಡುತ್ತಾರೆ . ಜೋಕಾಲಿ ಕಟ್ಟಿ ಆಟ ಆಡುತ್ತಾರೆ. ಹೀಗೆ ಸಂಬ್ರಮದಿಂದ ಹಬ್ಬ ಮಾಡುತ್ತಾರೆ. ಕರ್ನಟಾಕದಲ್ಲೇ ಅಲ್ಲ, ಇಡೀ ಭಾರತ ದೇಶದಲ್ಲಿ ನಾಗ ಪಂಚಮಿ ಆಚರಿಸುತ್ತಾರೆ.
Useful Links:
Subramanya Ashottara
Subramanya Stotram

Subramanya Bhujangam


Subrahmanya Ashtaka
Subramanya Shodasha nama stotra
Subrahmanya Sahasranamavali

Subramanya Songs by VidyaBhushana:
  1. Bandu Nodiro Shree Subramanya
  2. Subbaraya Shubhakaya
  3. Subrahmanya Suragraganya
  4. Subramanya Subramanya


June 26, 2009

Vishnu Sahasranama in Kannada / ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ

ಶ್ರೀ ವಿಷ್ಣು ಸಹಸ್ರನಾಮವನ್ನು ಎಲ್ಲರೂ ಕೇಳಿಯೇ ಇರುತ್ತೀವಿ. ಇದು ನಮ್ಮ ಹಿಂದೂ ಧರ್ಮದ ಪವಿತ್ರ, ಶ್ರೇಷ್ಠ ಮತ್ತು ಬಹಳ ಸಾಮಾನ್ಯವಾಗಿ ಪಠಿಸುವ ಸ್ತೋತ್ರ . ಸಹಸ್ರ ಎಂದರೆ ಸಾವಿರ ಎಂದರ್ಥ. ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ 1000 ನಾಮಗಳಿವೆ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡುಬರುತ್ತದೆ. ಮಹಾಭಾರತದ ಯುದ್ಧ ಆದ ಮೇಲೆ ಭೀಷ್ಮನು ಮರಣಶಯ್ಯೆ ಯಲ್ಲಿ ಇರುವಾಗ ಯುಧಿಷ್ಟಿರನು ಅವರನ್ನು ಧರ್ಮ ಪ್ರಶ್ನೆಗಳ ಉತ್ತರ ಕೇಳುತ್ತಾನೆ. ಭೀಷ್ಮರು ಉತ್ತರವಾಗಿ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳುತ್ತಾರೆ. ಶ್ರೀ ಶಂಕರಾಚಾರ್ಯರು, ಪರಾಶರ ಭಟ್ಟರು, ಮಧ್ವಾಚಾರ್ಯರು, ಮುಂತಾದವರು ಇದಕ್ಕೆ ತಮ್ಮದೇ ರೀತಿಯಲ್ಲಿ ಭಾಷ್ಯ ಬರೆದಿದ್ದಾರೆ. ಒಂದು ಸ್ತೋತ್ರ ಪಠಿಸುವುದರಿಂದ ಎಲ್ಲಾ ತರದ ಪುಣ್ಯ ಪ್ರಾಪ್ತಿ ಆಗುವುದು ಎಂಬ ನಂಬಿಕೆ.

ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Pages 1 - 4



Pages 5 - 8



ಈ ಸ್ತೋತ್ರವನ್ನು ಹಲವಾರು ಗಾಯಕರು ಹಾಡಿದ್ದಾರೆ. M.S.Subbulakshmi ಅವರು 1970 ಅಲ್ಲಿ ಹಾಡಿರುವ ಧ್ವನಿ ಮುದ್ರಣ 40 ವರ್ಷಗಳಾದರೂ ಇಂದಿಗೂ ಅತ್ಯಂತ ಜನಪ್ರಿಯ!!!

1.AudioLink - M.S.Subbulakshmi

2.AudioLink - Mahanadhi Shobhana

3.AudioLink - M.S.Sheela


Meaning of Vishnu Sahasranama Stotram


Vishnu Sahasranamam Video by M.S.Subbalakshmi


ಭಗವಂತನು
ಎಲ್ಲರನ್ನು ಹರಸಿ ಕಾಪಾಡಲಿ:)
Blog Widget by LinkWithin