ನಮಸ್ಕಾರ ಸ್ನೇಹಿತರೇ, ಎಲ್ಲರ ಮನೆಯಲ್ಲೂ ದಸರಾ ಹಬ್ಬ ಚೆನ್ನಾಗಿ ಆಯಿತು ಅಂತ ಆಶಿಸುತ್ತೀನಿ. ನವರಾತ್ರಿ ಹಬ್ಬದ ಬಗ್ಗೆ ವಿವರಗಳನ್ನು ಹುಡುಕಿಕೊಂಡು ನನ್ನ ಬ್ಲಾಗಿಗೆ ಬಹಳಷ್ಟು ಜನ ಭೇಟಿ ಮಾಡಿದ್ದೀರಾ. ನನ್ನ ಬ್ಲಾಗ್ ನಲ್ಲಿರುವ ಬರಹಗಳು, ಮಾಹಿತಿಗಳನ್ನು ಓದಿ ಮೆಚ್ಚುಗೆ ವ್ಯಕ್ತ ಪಡಿಸಿದ್ದೀರ. ನನ್ನ ಬರಹಗಳಿಂದ ನಿಮಗೆ ಅಲ್ಪ-ಸ್ವಲ್ಪ ಉಪಯೋಗವಾದರೂ ನನಗೆ ತುಂಬ ಖುಷಿ . ನಿಮ್ಮ ಮಾತುಗಳಿಂದ ನನಗೆ ಇನ್ನಷ್ಟು ಬರೆಯಲು ಉತ್ಸಾಹ ಪ್ರೇರಣೆ ಬಂದಿದೆ. ನನ್ನ blog ಗೆ ಭೇಟಿ ನೀಡಿದವರಿಗೆ , ಮೆಚ್ಚುಗೆ ,ಅಭಿಪ್ರಾಯ ತಿಳಿಸಿದಿವರಿಗೆ ನನ್ನ ಧನ್ಯವಾದಗಳು.

ಈ ಮಧ್ಯೆ "ಪೂಜಾ ವಿಧಾನಕ್ಕೆ" ಇನ್ನಷ್ಟು ಪ್ರಚಾರ ಸಿಕ್ಕಿದೆ. ಕೆಂಡಸಂಪಿಗೆ ಎಂಬ ಕನ್ನಡ online magazine ಅಲ್ಲಿ , ಜಿತೇಂದ್ರ ಅವರು ನನ್ನ ಬ್ಲಾಗ್ ಬಗ್ಗೆ ಬರೆದು, ಪರಿಚಯಿಸಿದ್ದಾರೆ. ಜಿತೇಂದ್ರ ಅವರಿಗೂ ನನ್ನ ಧನ್ಯವಾದಗಳು. ಇನ್ನಷ್ಟು ವಿವರ ಇಲ್ಲಿ ಓದಿ.

ಮತ್ತೊಮ್ಮೆ ಎಲ್ಲರಿಗೂ ನನ್ನ ವಂದನೆಗಳು.
ಇಲ್ಲಿಗೆ ಮತ್ತೆ ಭೇಟಿ ಮಾಡುತ್ತಿರಾ ಅಂತ ಆಶಿಸುತ್ತೀನಿ:)