Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label .Ashtottara. Show all posts
Showing posts with label .Ashtottara. Show all posts

September 29, 2013

Navagraha Ashtottara Series - Mangala (Angaraka) Ashtottara in Kannada / ಅಂಗಾರಕ ಅಷ್ಟೋತ್ತರ

ನವಗ್ರಹ ಅಷ್ಟೋತ್ತರಗಳ ಸರಣಿಯಲ್ಲಿ ಇದು ಮುಂದಿನ ಅಷ್ಟೋತ್ತರ. ಮಂಗಳ ಅಷ್ಟೋತ್ತರ ಅಥವಾ ಅಂಗಾರಕ ಅಷ್ಟೋತ್ತರ ಇಲ್ಲಿದೆ.



Right click on the image and open in new tab to enlarge

1.Audio Link - song 7

2.Audio Link


February 28, 2013

Navagraha Ashtottara Series - Chandra Ashtottara in Kannada / ಚಂದ್ರ ಅಷ್ಟೋತ್ತರ

ಬಹಳ ದಿನಗಳ ನಂತರ ಹೊಸ ಸ್ತೋತ್ರವನ್ನು ಬರೆಯಲು ಸಮಯ ಸಿಕ್ಕಿತು. ಎಲ್ಲಾ ನವಗ್ರಹ ಅಷ್ಟೋತ್ತರಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತೇನೆ. ಚಂದ್ರ ಅಷ್ಟೋತ್ತರ ಇಲ್ಲಿದೆ.


Right click on the image and open in new tab to enlarge

1.Audio Link

2.Audio Link

January 25, 2012

Navagraha Ashtottara Series - Surya Ashtottara in Kannada / ಸೂರ್ಯ ಅಷ್ಟೋತ್ತರ

ಬಹಳಷ್ಟು ಓದುಗರು ನವಗ್ರಹ ಅಷ್ಟೋತ್ತರಗಳನ್ನು ಪ್ರಕಟಿಸಿ ಅಂತ ಕೇಳಿದ್ದರೆ. ಮುಂದಿನ ವಾರಗಳಲ್ಲಿ ನಾನು ಎಲ್ಲ ನವಗ್ರಹಗಳ ಅಷ್ಟೋತ್ತರ ಸರಮಾಲೆಯನ್ನು ಇಲ್ಲಿ ಬರೆಯುತ್ತೀನಿ. ಮೊದಲನೆಯದಾಗಿ  ಸೂರ್ಯ ಅಷ್ಟೋತ್ತರ ಇಲ್ಲಿದೆ. ಸಧ್ಯದಲ್ಲೇ ರಥ ಸಪ್ತಮಿ ಹಬ್ಬ ಬರುತ್ತಿದೆ, ಅದಕ್ಕೂ ಈ ಸ್ತೋತ್ರ ಉಪಯುಕ್ತ.

December 27, 2009

Sri Vishnu Ashtottara in Kannada / ಶ್ರೀ ವಿಷ್ಣು ಅಷ್ಟೋತ್ತರ

ಶ್ರೀ ವಿಷ್ಣು ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

November 11, 2009

Anjaneya Ashtottara in Kannada / ಆಂಜನೇಯ ಅಷ್ಟೋತ್ತರ

ಶ್ರೀ ಆಂಜನೇಯ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.



1.Hanuman ashtottara Audio link - by Thiyagarajan

2.Hanumana ashtottara Audio link - by Achuta Rama Sashtry

Related Link: Hanuman Chalisa

July 17, 2009

Subrahmanya Ashtottara in Kannada / ಶ್ರೀ ಸುಬ್ರಮಣ್ಯ ಅಷ್ಟೋತ್ತರ

ನಾಗರ ಪಂಚಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ಶ್ರೀ ಸುಬ್ರಮಣ್ಯ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .

ಅಷ್ಟೊತ್ತರದ ಧ್ವನಿ ಮುದ್ರಣ ಕೆಳಗಿದೆ.
1.Subramanya Ashtottara Audio link - by Thiyagarajan (song 9)
2.Subramanya Ashtottara Audio link - by Lakshmipathi (song 12)

May 6, 2009

Narasimha Jayanti, Lakshmi Narasimha Ashtottara Shatanama in Kannada

ನರಸಿಂಹ ಜಯಂತಿ , ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ


ವಿಷ್ಣುವಿನ ಹತ್ತವತಾರದಲ್ಲಿ ನರಸಿಂಹ ಅವತಾರವು ಒಂದು. ಅರ್ಧ ಮನುಷ್ಯ ಅರ್ಧ ಸಿಂಹ ಇರುವ ರೂಪ. ಭಕ್ತ ಪ್ರಹ್ಲಾದನ ಮೊರೆಯನ್ನು ಕೇಳಿ ಕಂಭ ಒಡೆದು ಪ್ರತ್ಯಕ್ಷನಾಗಿ, ಹಿರಣ್ಯ ಕಷಿಪುವನ್ನು ವಧೆ ಮಾಡಿ ಪ್ರಹ್ಲಾದನನ್ನು ಶ್ರೀ ನೃಸಿಂಹ ಕಾಪಾಡಿದನು.

ನರಸಿಂಹ ಜಯಂತಿ ಹಬ್ಬವನ್ನು ವೈಶಾಖ ಮಾಸದ ಶುಕ್ಲ ಪಕ್ಷದಲ್ಲಿ ಚತುರ್ದಶಿಯಂದು ಆಚರಿಸಲಾಗುತ್ತದೆ. ಇದನ್ನು ಶ್ರೀ ವೈಷ್ಣವರು, ಸೌರಮಾನ ಪಂಚಾಂಗ ಅನುಸರಿಸುವರು ಬೇರೆ ತಿಥಿ ನಕ್ಷತ್ರದಲ್ಲಿ ಆಚರಿಸುತ್ತಾರೆ. ದಿನ ಲಕ್ಷ್ಮಿ ನರಸಿಂಹ ಸ್ವಾಮಿಗೆ
ಷೋಡಶೋಪಚಾರದಿಂದ ಪೂಜೆಮಾಡಬೇಕು. ಪೂಜಾ ವಿಧಾನ ಇಲ್ಲಿದೆ.ಪೂಜಾ ಸಾಮಗ್ರಿಗಳ ವಿವರ ಇಲ್ಲಿದೆ. ಕೆಲವು ಮನೆಗಳಲ್ಲಿ ಲಕ್ಷ್ಮಿ ನರಸಿಂಹ ಸ್ವಾಮಿ ವ್ರತ ಮಾಡುತ್ತಾರೆ. ಒಂದು ಮಂಟಪ ನಿರ್ಮಿಸಿ, ಮಧ್ಯದಲ್ಲಿ ಗೋಧಿಯನ್ನು ಹರಡಿ, ಕಲಶ ಸ್ಥಾಪಿಸಿ, ನರಸಿಂಹ ದೇವರ ಪಟ, ಪ್ರತಿಮೆ ಇಟ್ಟು ಕ್ರಮವಾಗಿ ಪೂಜೆ ಮಾಡಿ ವ್ರತ ಆಚರಿಸುತ್ತಾರೆ. ನೈವೇದ್ಯಕ್ಕೆ ಸಾಮಾನ್ಯವಾಗಿ ಕೋಸಂಬರಿ ಪಾನಕ ಮಾಡುತ್ತಾರೆ. ವೈಷ್ಣವರು ಪುಳಿಯೋಗರೆ, ಮೊಸರನ್ನ ಮಾಡುತ್ತಾರೆ. ಶ್ರೀ ನರಸಿಂಹ ಪೂಜೆಯಿಂದ ನಾನಾ ಪುಣ್ಯಗಳಿಗೆ ಪಾತ್ರರಗುತ್ತೀವಿ ಎಂಬ ನಂಬಿಕೆ ಇದೆ.

ಶ್ರೀ ಲಕ್ಷ್ಮಿ ನರಸಿಂಹ ಅಷ್ಟೋತ್ತರ ಶತನಾಮ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio of Narasimha Ashtottara - by VidyaBhushana

2.Audio link by T.Srinivas

ಶ್ರೀ ನರಸಿಂಹ ಸ್ತೋತ್ರಗಳು, ಹಾಡುಗಳು:

ಶ್ರೀ ಲಕ್ಷ್ಮಿ ನರಸಿಂಹ ಸ್ವಾಮಿಯ ಕೃಪೆ ಎಲ್ಲರ ಮೇಲೂ ಸದಾ ಇರಲಿ :)

March 31, 2009

Rama Ashtottara in Kannada / ಶ್ರೀ ರಾಮ ಅಷ್ಟೋತ್ತರ

ರಾಮ ನವಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ಶ್ರೀ ರಾಮ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಅಷ್ಟೊತ್ತರದ ಧ್ವನಿ ಮುದ್ರಣ ಕೆಳಗಿದೆ.

1. Audio link by Shiva kumar


2. Audio Link by Hari Achuta Shastry


3. Audio link by N.S.Prakash Rao

Related Link:

December 10, 2008

Dattatreya Jayanthi, Dattatreya Ashtottara in Kannada / ದತ್ತಾತ್ರೇಯ ಜಯಂತಿ , ದತ್ತಾತ್ರೇಯ ಅಷ್ಟೋತ್ತರ



ದತ್ತಾತ್ರೇಯ ಜಯಂತಿ ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ ದಿನ ಆಚರಿಸುತ್ತಾರೆ. ಗುರು ದತ್ತಾತ್ರೇಯರು ಬ್ರಹ್ಮ ,ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಸೇರಿದ ಅವತಾರ. ಔದುಂಬರ ವ್ರಕ್ಷದಲ್ಲಿ ವಾಸ ಮಾಡುತ್ತಾರೆ. ಅತ್ರಿ ಮುನಿಗಳು ಹಾಗು ಅನಸೂಯ ದೇವಿಗೆತ್ರಿಮೂರ್ತಿಗಳು ಪುತ್ರರಾಗಿ ಜನಿಸಿದರು. ಇದರ ಹಿಂದೆ ಇರುವ ಕಥೆ ಹೀಗಿದೆ.
ಇಂದ್ರಾದಿ ದೇವತೆಗಳು, ನಾರದರು ಅನಸೂಯಾದೇವಿಯ ಪಾತಿವ್ರತೆಯನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಕೇಳಿದ ತ್ರಿಮೂರ್ತಿಗಳು, ತಾವೇ ಸ್ವತಃ ಹೋಗಿ ಅದನ್ನು ಕಣ್ಣಾರೆ ನೋಡುವ ಆಸೆ ಆಯಿತು. ಒಂದು ದಿನ ಮಧ್ಯಾಹ್ನ ಅತ್ರಿ ಮುನಿಗಳು ಮನೆಯಲ್ಲಿಲ್ಲದಿರುವಾಗ, ಬ್ರಹ್ಮ , ವಿಷ್ಣು ಮಹೇಶ್ವರರು ಬ್ರಾಹ್ಮಣವೇಷ ಧರಿಸಿ ಭಿಕ್ಷಾಂ ದೇಹಿ ಎಂದು ಹೇಳುತ್ತಾ ಅನುಯ ದೇವಿ ಮನೆಗೆ ಬಂದರು. ಆಕೆಯು ಸಂತಸದಿಂದ ಇವರನ್ನು ಬರಮಾಡಿಕೊಂಡು ಇವರಿಗೆ ಊಟಕ್ಕೆ ವ್ಯವಸ್ಥೆ ಮಾಡಲು ಹೊರಟಳು. ಅಡಿಗೆಯಾದ ನಂತರ ಇವರಿಗೆ ಊಟ ಬಡಿಸಲು ಬಂದಾಗ, ತ್ರಿಮೂರ್ತಿಗಳು " ನೀನು ಭಿಕ್ಷೆ ಬೇಡಿ ಬಂದವರಿಗೆ ಇಚ್ಛಾ ಭೋಜನ ಮಾಡಿಸುತ್ತೀಯ ಅಂತ ಕೇಳಿದ್ದೀವಿ. ನಮಗೆ ನೀನು ವಿವಸ್ತ್ರಳಾಗಿ ಊಟ ಬಡಿಸಿದರೆ ಮಾತ್ರ ಊಟ ಮಾಡುತ್ತೀವಿ, ಇಲ್ಲದಿದ್ದರೆ ಬೇರೆ ಮನೆಗೆ ಹೋಗುತ್ತಿವಿ " ಎಂದರು. ಇದನ್ನು ಕೇಳಿದ ಅನಸೂಯಾದೇವಿ ಇವರು ಸಾಮಾನ್ಯ ಪುರುಷರಲ್ಲ ಎಂದು ಅರಿತಳು. ತನ್ನ ಪಾತಿವ್ರತೆಯನ್ನು ಪರೀಕ್ಷಿಸಲು ಬಂದಿದ್ದಾರೆ ಎಂದುಕೊಂಡಳು. ತನ್ನ ಪತಿಯನ್ನು ನೆನೆದು ವಿವಸ್ತ್ರಳಾಗಿ ಊಟ ಬಡಿಸಲು ಹೊರಬಂದು ನೋಡಿದರೆ, ತ್ರಿಮೂರ್ತಿಗಳು ಪುಟ್ಟ ಮಕ್ಕಳಾಗಿ ಎಲೆಯ ಮುಂದೆ ಅಂಬೆಗಾಲು ಇಡುತ್ತ ಅಳುತ್ತಿದ್ದರು. ಈ ಅಳುವ ಕಂದಮ್ಮಗಳಿಗೆ ಅನಸೂಯಾ ತನ್ನ ಹಾಲು ಕುಡಿಸಿ, ಜೋಲಿಯಲ್ಲಿ ಹಾಕಿ ಮಲಗಿಸಿದಳು. ಅಷ್ಟು ಹೊತ್ತಿಗೆ ಮನೆಗೆ ಬಂದ ಅತ್ರಿಮುನಿಗಳು, ಈ ಮಕ್ಕಳನ್ನು ನೋಡಿ , ಯಾರಿವರು ಎಂದು ಪತ್ನಿಯನ್ನು ಕೇಳಿದರು. ನಡೆದ ಸಂಗತಿಯನ್ನು ಪತ್ನಿಯಿಂದ ತಿಳಿದ ಅತ್ರಿಗಳು, ಇವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು. ಆಗ ಬ್ರಹ್ಮ , ವಿಷ್ಣು , ಮಹೇಶ್ವರರು ಪ್ರತ್ಯಕ್ಷರಾದರು. ಅನಸೂಯಾ ದೇವಿಯ ಪಾತಿವ್ರತೆಯನ್ನು ಕೊಂಡಾಡಿ, ಏನು ವರ ಬೇಕಾದರೂ ಕೇಳು ಎಂದರು. ಆಕೆಯು, "ತ್ರಿಮೂರ್ತಿಗಳೇ, ನೀವು ಮಕ್ಕಳಾಗಿ ನಮ್ಮ ಮನೆಗೆ ಬಂದಿದ್ದಿರಾ, ನಮ ಮನೆಯಲ್ಲೇ ಇರಿ" ಎಂದು ಕೇಳಿದಳು. ಅವರು ತಥಾಸ್ತು ಎನ್ನಲು, ಆ ಮೂರೂ ಮಕ್ಕಳು, ಅತ್ರಿ ಮುನಿಗಳ ಮನೆಯಲ್ಲೇ ಇಳಿದರು. ದೊಡ್ಡವರಾದ ಮೇಲೆ, ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೆ ತೆರಳಿದನು, ಮಹೇಶ್ವರನು ಧೂರ್ವಸನಾಗಿ ತೆರಳಿದನು. ಇವರಿಬ್ಬರು ಹೋಗುವ ಮುನ್ನ ತಮ್ಮ ಒಂದು ಅಂಶವನ್ನು ವಿಷ್ಣುವಿನಲ್ಲಿ ಬಿಟ್ಟು ಹೋದರು. ಆಗ ವಿಷ್ಣು ಸ್ವರೂಪನಾದ ದತ್ತನಿಗೆ ಮೂರು ಮುಖಗಳಾವು. ಇವರೇ ಗುರು ದತ್ತಾತ್ರೇಯರಾದರು.
ದತ್ತಾತ್ರೇಯರು ಗುರು ಪರಂಪರೆಯಲ್ಲಿ ಆದಿ ಗುರು. ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸಾಯಿ ಬಾಬಾ ಇವರೆಲ್ಲ ಗುರುಗಳ ಅವತಾರಗಳು. ಈ ಕಲಿಯುಗದಲ್ಲಿ ಗುರುವಿನ ಸೇವೆ ಮಾಡಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಗುರುವಿನ ಶಕ್ತಿ, ಮಹಿಮೆ ಅಪಾರ. ಸರಸ್ವತಿ ಗಂಗಧರರು ಗುರುಗಳ ಮಹಿಮೆಯನ್ನು "ಗುರು ಚರಿತ್ರೆ " ಪುಸ್ತಕದಲ್ಲಿ ಬರೆದಿದ್ದರೆ. ಇದರಲ್ಲಿ 52 ಅಧ್ಯಯವಿದೆ.ದತ್ತನ ಭಕ್ತರು ಗುರುಚರಿತ್ರೆಯನ್ನು ಪಾರಾಯಣ ಮಾಡುತ್ತಾರೆ.ಸಂಕ್ಷಿಪ್ತ ಗುರುಚರಿತ್ರೆಯನ್ನು ಇಲ್ಲಿ ಓದಬಹುದು


ದತ್ತಾತ್ರೇಯ ಜಯಂತಿ ಪ್ರಯುಕ್ತ ದತ್ತಮೂರ್ತಿ ಆರಾಧನೆ, ದತ್ತ ಭಜನೆ,ಔದುಂಬರ ವೃಕ್ಷಕ್ಕೆ ಪೂಜೆ, ಗುರುಚರಿತ್ರೆ ಪಾರಯಣೆ ಮಾಡುತ್ತಾರೆ. ದತ್ತಾತ್ರೇಯ ಅಷ್ಟೋತ್ತರ ಕೆಳಗಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



Ashtottara Audio Link by Bombay Sisters

ಗುರು ದತ್ತಾತ್ರೇಯರ ಹಾಡುಗಳು:
ಗುರು ದತ್ತಾತ್ರೇಯರ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ:)

December 3, 2008

Satyanarayana Ashtottara / ಶ್ರೀ ಸತ್ಯನಾರಾಯಣ ಅಷ್ಟೋತ್ತರ

Click here for Satyanarayana Pooja Vidhana
ಶ್ರೀ ಸತ್ಯನಾರಾಯಣ ಅಷ್ಟೋತ್ತರ ಕೆಳಗಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .


Related Links:

November 9, 2008

Utthana Dwadashi, Tulasi Ashtottara / ತುಳಸಿ ಹಬ್ಬ

ಉತ್ಥಾನ ದ್ವಾದಶಿ ಅಥವಾ ತುಳಸಿ ಹಬ್ಬವನ್ನು ಕಾರ್ತಿಕ ಮಾಸದ ಶುಕ್ಲ ಪಕ್ಷದ ದ್ವಾದಶಿಯಂದು ಆಚರಿಸುವರು. ಇದನ್ನು ಕಿರು ದೀಪಾವಳಿ ಎಂದೂ ಕರೆಯುತ್ತಾರೆ. ಈ ದಿನ ತುಳಸಿ ಕಟ್ಟೆ /ಬೃಂದಾವನವನ್ನು ಅಲಂಕಾರ ಮಾಡುತ್ತಾರೆ. ತುಳಸಿಯ ಗಿಡದ ಜೊತೆ ನಲ್ಲಿಕಾಯಿ ಗಿಡವನ್ನು ಇಟ್ಟು ಪೂಜೆ ಮಾಡುತ್ತಾರೆ. ತುಳಸಿಯು ಶ್ರೀ ಕೃಷ್ಣನನ್ನು ಈ ದಿನ ವಿವಾಹ ಆದಳು ಎಂಬ ನಂಬಿಕೆ ಇದೆ. ಆದ್ದರಿಂದ ತುಳಸಿಯ ಜೊತೆ ಕೃಷ್ಣನ ಪಟ ಇಟ್ಟು , ಇಬ್ಬರಿಗೂ ಪೂಜೆ ಮಾಡುತ್ತಾರೆ. ನಲ್ಲಿಕಾಯಿಯಲ್ಲಿ ತುಪ್ಪದ ಆರತಿ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ, ನಲ್ಲಿಕಾಯಿ ಗಿಡ ಉಪಯೋಗಿಸುತ್ತಾರೆ. ಗಣಪತಿ ಪೂಜೆ ಮಾಡಿ ನಂತರ ತುಳಸಿ ಪೂಜೆ ಮಾಡಬೇಕು . ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ತುಳಸಿ ಅಷ್ಟೋತ್ತರ ಕೆಳಗಿದೆ


ಕೆಲವು ತುಳಸಿ ಸ್ತೋತ್ರಗಳು ಕೆಳಗಿವೆ.

ಯನ್ಮೂಲೇ ಸರ್ವ ತೀರ್ಥಾನಿ ಯನ್ಮಧ್ಯೇ ಸರ್ವದೇವತಾ
ಯದಾಗ್ರೆ ಸರ್ವ ವೇದಶ್ಚ ತುಳಸಿ ತ್ವಂ ನಮಾಮ್ಯಹಂ


ತುಳಸಿ ವಂದನೆ - Audio link(Album)

Tulasi Stotras by Ashit desai

Tulasi Stotramaala Vol 1

Tulasi Stotramaala Vol 2


ತುಳಸಿ ಸ್ತುತಿ-deezer link is no longer available
ತುಳಸಿ ನಮಾಷ್ಟಕಂ - deezer link is no longer available
Songs on Tulasi: 1. Kalyanam Tulasi Kalyanam 2. Brundavanave Mandiravaagiha ನಮ್ಮ ಹಿಂದೂ ಸಂಪ್ರದಾಯದಲ್ಲಿ ತುಳಸೀ ಗಿಡಕ್ಕೆ ತುಂಬ ಪ್ರಾಮುಖ್ಯತೆ ಇದೆ. ತುಳಸೀ ದರ್ಶನದಿಂದ ಪಾಪ ಪರಿಹಾರ, ಸ್ಪರ್ಶದಿಂದ ಪವಿತ್ರತೆ , ರೋಗ ಪರಿಹಾರ, ಪ್ರೋಕ್ಷಿಸಿದರೆ ಆಯಸ್ಸು ವೃದ್ಧಿ, ಸಸಿಯನ್ನು ನೆಡುವುದರಿಂದ ಶ್ರೀ ಕೃಷ್ಣನ ಸಾನ್ನಿಧ್ಯ ಲಭ್ಯ, ಅರ್ಚಿಸಿ ಪೂಜಿಸಿದರೆ ಮೋಕ್ಷ ಸಿಗುತ್ತದೆ ಎಂದು ಸನಾತನ ಧರ್ಮ ಹೇಳುತ್ತದೆ. ಹೀಗಾಗಿ ಎಲ್ಲರ ಮನೆಯಲ್ಲೂ ತುಳಸಿ ಗಿಡವನ್ನುಬೆಳೆಸುತ್ತಾರೆ. ಅದಕ್ಕೆ ದಿನ ಪೂಜೆ, ಪ್ರದಕ್ಷಿಣೆ , ನಮಸ್ಕಾರ ಮಾಡುತ್ತಾರೆ. ಇದರೊಂದಿಗೆ ತುಳಸೀ ಗಿಡಕ್ಕೆ ಔಷಧೀಯ ಗುಣಗಳೂಇದೆ. ಕೆಮ್ಮು ನೆಗಡಿಗೆ , ಚರ್ಮ ವ್ಯಾಧಿಗಳಿಗೆ ಮನೆ ಮದ್ದು ಈ ತುಳಸೀ. ನೆಲ್ಲಿಕಾಯಿ ಕೂಡ ಔಷಧೀಯ ಗುಣ ಹೊಂದಿದೆ. ಇದು ವಾತ ಪಿತ್ತಗಳನ್ನು ಶಮನ ಮಾಡುತ್ತದೆ ಎಂದು ಹೇಳಿತ್ತಾರೆ. ಹಬ್ಬ ಆದ ನಂತರ ನಮ್ಮ ಮನೆಯಲ್ಲಿ ನೆಲ್ಲಿಕಾಯಿ ಉಪ್ಪಿನಕಾಯಿ ಅಥವಾ ಮೊರಬ್ಬ ಮಾಡುತ್ತಾರೆ. ಉಪ್ಪಿನಕಾಯಿ ನೆನೆಸಿಕೊಂಡರೆ ಬಾಯಲ್ಲಿ ನೀರು ಬರುತ್ತಾ ಇದೆ :)

October 6, 2008

Durga Ashtottara Shatanama Stotra / ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ

"ಎಲ್ಲರಿಗೂ ದುರ್ಗಾಷ್ಟಮಿ ಹಬ್ಬದ ಶುಭಾಶಯಗಳು "
ದುರ್ಗಾ ದೇವಿಯ ಇನ್ನೊಂದು ಸ್ತೋತ್ರ - ದುರ್ಗಾಷ್ಟೋತ್ತರ ಶತನಾಮ ಸ್ತೋತ್ರ ಇಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ .
ಶತನಾಮ ಸ್ತೋತ್ರದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು -
1.Audio Link - by Ravindra Sathe

2.Another Audio Link

ದುರ್ಗಾ ಸ್ತೋತ್ರಗಳು :

Link to Durga Ashtottara Shatanama Stotra in Hindi and English



October 1, 2008

Saraswathi Pooja / Saraswathi Ashtottara in Kannada / ಸರಸ್ವತಿ ಅಷ್ಟೋತ್ತರ

ಸರಸ್ವತಿ ಪೂಜೆ/ಹಬ್ಬ ,ನವರಾತ್ರಿಯಲ್ಲಿ ಮೂಲ ನಕ್ಷತ್ರದ ದಿನ ಮಾಡುತ್ತಾರೆ. ಸರಸ್ವತಿಯು ವಿದ್ಯೆ, ಜ್ಞಾನ, ಸಂಗೀತ, ಸಾಹಿತ್ಯ ಎಲ್ಲದಕ್ಕೂ ಅಧಿದೇವತೆ. ಈ ದಿನ ಸರಸ್ವತಿ ದೇವಿಯ ಪಟ, ವಿಗ್ರಹದ ಜೊತೆಗೆ ವಿಧ್ಯಾಭ್ಯಾಸಕ್ಕೆ ಬೇಕಾದ ಪುಸ್ತಕ, ಪೆನ್ನು, ಪೆನ್ಸಿಲ್ಲು , ಇತ್ಯಾದಿಗಳನ್ನೂ, ಸಂಗೀತ ವಾದ್ಯಗಳನ್ನು ಇಟ್ಟು ಪೂಜೆ ಮಾಡಬೇಕು.
ಪೂಜಾ ವಿಧಾನ ಇಲ್ಲಿದೆ . ಸರಸ್ವತಿ ಸ್ತೋತ್ರಗಳು ಇಲ್ಲಿದೆ.

ಸರಸ್ವತಿ ಅಷ್ಟೋತ್ತರ ಕೆಳಗಿದೆ. ದೊಡ್ದದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

.
ಸರಸ್ವತಿ ಅಷ್ಟೊತ್ತರದ ಧ್ವನಿ ಮುದ್ರಣ ಇಲ್ಲಿ ಕೇಳಿ - Audio link of Ashtottara by Raghavan shastri - song 2

Audio link of Ashtottara by Another Artist


ಸರಸ್ವತಿ ಪೂಜೆಯನ್ನು ಬೇರೆ ದಿನಗಳಲ್ಲೂ ಮಾಡುತ್ತಾರೆ. ಉತ್ತರ ಭಾರತದಲ್ಲಿ ಮಾಘ ಮಾಸದ ಶುಕ್ಲ ಪಂಚಮಿ ದಿನ "ವಸಂತಪಂಚಮಿ " ಎಂದು ಸರಸ್ವತಿಯನ್ನು ಪೂಜೆ ಮಾಡುತ್ತಾರೆ. ಇದೇ ದಿನ ಶ್ರಿಂಗೇರಿಯಲ್ಲಿ ಶಾರದಾಂಬೆಗೆ ವಿಶೇಷ ಪೂಜೆ ನಡೆಯುತ್ತೆ. ಇದಲ್ಲದೇ ವಿದ್ಯಾರಂಭ ಮಾಡುವ ಮುನ್ನ ವಿದ್ಯಾ ಅಧಿದೇವತೆಯಾದ ಸರಸ್ವತಿಯನ್ನು ಧ್ಯಾನ ಮಾಡುತ್ತಾರೆ. ಮಕ್ಕಳನ್ನು ಮೊದಲ ಬಾರಿ ಶಾಲೆಗೆ ಕಳಿಸುವ ಮುನ್ನ, ಪ್ರತಿ ವರ್ಷ ಶಾಲೆ ಶುರುವಾಗುವ ಮುನ್ನ, ಪರೀಕ್ಷೆಗೆ ಮುಂಚೆ, ಯಾವುದೇ ಹೊಸ ವಿದ್ಯೆಯನ್ನು(ಸಂಗೀತ, ನೃತ್ಯ, ವೇದಾಭ್ಯಾಸ, ಚಿತ್ರಕಲೆ) ಕಲಿಯುವ ಮುಂಚೆ ಸರಸ್ವತಿ ಆಶಿರ್ವಾದ ಪಡೆದುಕೊಂಡೇ ಮುಂದೆಹೋಗಬೇಕು.

ಸರಸ್ವತಿ ಮೇಲೆ ಹಾಡುಗಳು :
ಮಮವತು ಶ್ರೀ ಸರಸ್ವತಿ[song 2] ;
ಶ್ರೀ ಸರಸ್ವತಿ ನಮೋಸ್ತುತೆ
ಸರಸ್ವತಿ ದೇವಿಯು ಎಲ್ಲರಿಗೂ ವಿದ್ಯಾ ಬುದ್ಧಿ ಕೊಟ್ಟು ಕಾಪಾಡಲಿ :)
Related Links:
Sarasawthi Devi songs with lyrics at Bhakthigeetha.

September 30, 2008

Durga Ashtottara in Kannada / ಶ್ರೀ ದುರ್ಗಾ ಅಷ್ಟೋತ್ತರ

ದುರ್ಗಾಷ್ಟಮಿ ಹಬ್ಬ ಬರುತ್ತಾ ಇದೆ. ಅದಕ್ಕಾಗಿ ದುರ್ಗಾ ಅಷ್ಟೋತ್ತರ ಇಲ್ಲಿದೆ.





ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link 1

Audio Link 2 by Rajagopalan Thiagarajan





September 8, 2008

Ananta Padmanabha Ashtottara & Vrata in Kannada / ಅನಂತ ಪದ್ಮನಾಭ ಅಷ್ಟೋತ್ತರ

ಅನಂತನ ವ್ರತವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ದಶಿ ದಿನ ಆಚರಿಸುತ್ತಾರೆ. ವಾರ ಅನಂತ ಚತುರ್ದಶಿ ಹಬ್ಬ ಬರುತ್ತಾ ಇದೆ. ಅದಕ್ಕೆ ಅನಂತ ಪದ್ಮನಾಭ ಅಷ್ಟೋತ್ತರ ಇಲ್ಲಿದೆ. ಒಂದು ಕುತೂಹಲಕರವಾದ ವಿಷಯ ಅಂದರೆ, ಅಷ್ಟೋತ್ತರದಲ್ಲಿ ಪ್ರತಿಯೊಂದು ನಾಮವು '" ಅಕ್ಷರದಿಂದ ಶುರುವಾಗುತ್ತೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ


ಅನಂತ ಪದ್ಮನಾಭ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು- Ananta Padmanabha Vrata Audio link

August 17, 2008

Krishna Ashtottara in Kannada / ಶ್ರೀ ಕೃಷ್ಣ ಅಷ್ಟೋತ್ತರ

ಈ ವಾರ ಶ್ರೀ ಕೃಷ್ಣ ಜನ್ಮಾಷ್ಟಮಿ ಬರುತ್ತಾ ಇದೆ. ಅದಕ್ಕಾಗಿ ಶ್ರೀ ಕೃಷ್ಣ ಅಷ್ಟೋತ್ತರ ಇಲ್ಲಿದೆ.



ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - Audio Link

August 8, 2008

Lakshmi Ashtottara in Kannada / ಶ್ರೀ ಲಕ್ಷ್ಮೀ ಅಷ್ಟೋತ್ತರ

ಮುಂದಿನ ವಾರ ವರಮಹಾಲಕ್ಷ್ಮಿ ವ್ರತ ಬರುತ್ತಾ ಇದೆ. ಅದಕ್ಕಾಗಿ ಶ್ರೀ ಲಕ್ಷ್ಮೀ ಅಷ್ಟೋತ್ತರ ಇಲ್ಲಿದೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು - 1.Audio Link
2.Lakshmi Ashtottara by M.S.Subbalakshmi -song15

3.Audio link -song 3


Link to Lakshmi Ashtottara in Hindi and English

July 23, 2008

Shiva Ashtottara in Kannada / ಶ್ರೀ ಶಿವ ಅಷ್ಟೋತ್ತರ

ಶ್ರೀ ಶಿವ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.




Audio Link for Shiva Ashtotharam

1.Audio Link by Thyagarajan R [song 2]

2.Audio Link by TS Ranganathan [song 6]

3.Audio Link by another artist

Related Link:

July 13, 2008

Vinayaka Ashtottara in Kannada / ವಿನಾಯಕ ಅಷ್ಟೋತ್ತರ

ಯಾವಾಗಲು ವಿನಾಯಕನಿಗೆ ಮೊದಲು ಪೂಜೆ. ಎಲ್ಲ ವಿಘ್ನಗಳನ್ನು ತೊಡೆದು ಹಾಕಿ ನಮ್ಮ ಕಾರ್ಯವನ್ನು ಸಿಧ್ಧಿ ಮಾಡು ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥಿಸುತ್ತೇವೆ. ಕೆಳಗೆ ಗಣೇಶ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ

Ganesha Ashtottara ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು :


Audio Link by Prakash Rao

June 28, 2008

Lalitha Ashtottara in Kannada / ಶ್ರೀ ಲಲಿತ ಅಷ್ಟೋತ್ತರ

ಶ್ರೀ ಲಲಿತ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



ಅಷ್ಟೋತ್ತರದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು :

Audio Link by Bombay Sisters
Blog Widget by LinkWithin