Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label :Ganesha/Vinayaka. Show all posts
Showing posts with label :Ganesha/Vinayaka. Show all posts

August 29, 2010

Sankata Nashana Ganesha Stotram in Kannada/ Ganesha Dwadashanama /ಸಂಕಟ ನಾಶನ ಗಣೇಶ ಸ್ತೋತ್ರಂ/ಗಣೇಶ ದ್ವಾದಶನಾಮ



ಈ ಸ್ತೋತ್ರದ ಹೆಸರೇ ಹೇಳುವಂತೆ ಇದನ್ನು ಪಠಿಸಿದರೆ ಎಲ್ಲ ಸಂಕಷ್ಟಗಳು ನಾಶವಾಗುತ್ತದೆ ಎಂಬ ನಂಬಿಕೆ. ಇದರಲ್ಲಿ ಗಣಪತಿಯ ೧೨ ನಾಮಗಳಿವೆ. ಆದ್ದರಿಂದ ಇದನ್ನು ಗಣೇಶ ದ್ವಾದಶ ನಾಮಸ್ತೋತ್ರ ಎಂದೂ ಕರೆಯುತ್ತಾರೆ.

ಓಂ ಪ್ರಣಮ್ಯ ಶಿರಸಾ ದೇವಂ ಗೌರೀಪುತ್ರಂ ವಿನಾಯಕಮ್‌
ಭಕ್ತಾವಾಸಂ ಸ್ಮರೇನಿತ್ಯಂ ಆಯುಶ್ಕಾಮಾರ್ಥ ಸಿದ್ಧಯೇ 1

ಪ್ರಥಮಂ ವಕ್ರತುಂಡಂ ಚ ಏಕದಂತಂ ದ್ವಿತೀಯಕಂ
ತೃತೀಯಂ ಕೃಷ್ಣ ಪಿಂಗಾಕ್ಷಂ ಗಜವಕ್ತ್ರಂ ಚತುರ್ಥಕಮ್‌ 2

ಲಂಬೋದರಂ ಪಂಚಮಂ ಚ ಷಷ್ಠಂ ವಿಕಟಮೇವ ಚ
ಸಪ್ತಮಂ ವಿಘ್ನರಾಜೇಂದ್ರಂ ಧೂಮ್ರವರ್ಣಂ ತಥಾಷ್ಟಮಮ್‌ 3

ನವಮಂ ಫಾಲಚಂದ್ರಂ ಚ ದಶಮಂ ತು ವಿನಾಯಕಮ್‌
ಏಕಾದಶಂ ಗಣಪತಿಂ ದ್ವಾದಶಂ ತು ಗಜಾನನಮ್‌ 4

ದ್ವಾದಶೈತಾನಿ ನಾಮಾನಿ ತ್ರಿಸಂಧ್ಯಂ ಯಃ ಪಠೇನ್ನರಃ
ನ ಚ ವಿಘ್ನಭಯಂ ತಸ್ಯ ಸರ್ವಸಿದ್ಧಿ ಕರಃ ಪ್ರಭೋ 5

ವಿದ್ಯಾರ್ಥಿ ಲಭತೇ ವಿದ್ಯಾಂ ಧರ್ನಾರ್ಥಿ ಲಭತೇ ಧನಮ್‌
ಪುತ್ರಾರ್ಥಿ ಲಭತೇ ಪುತ್ರಾನ್‌ ಮೋಕ್ಷಾರ್ಥಿ ಲಭತೇ ಗತಿಮ್‌ 6

ಜಪೇದ್ಗಣಪತಿ ಸ್ತೋತ್ರಂ ಷಡ್ಭಿರ್ಮಾಸೈಃ ಫಲಂ ಲಭೇತ್‌
ಸಂವತ್ಸರೇಣ ಸಿದ್ಧಿಂ ಚ ಲಭತೇ ನಾತ್ರ ಸಂಶಯಃ 7

ಅಷ್ಟೇಭ್ಯೋ ಬ್ರಾಹ್ಮಣೇಭ್ಯಶ್ಚ ಲಿಖಿತ್ವಾಯಃ ಸಮರ್ಪಯೇತ್‌
ತಸ್ಯ ವಿದ್ಯಾ ಭವೇತ್‌ಸರ್ವಾ ಗಣೇಶಸ್ಯ ಪ್ರಸಾದತಃ 8

ಇತಿ ಶ್ರೀ ನಾರದ ಪುರಾಣೆ ಸಂಕಟ ನಾಶನಂ ಗಣೇಶ ಸ್ತೋತ್ರಂ ಸಂಪೂರ್ಣಂ


1.Audio Link by Shruti Sadolikar [song 1]

2.Audio Link by Sikkil Gurucharan [song 7]

3.Audio Link by a group [song 4]

4.Audio Link by another artist

June 26, 2010

Ganesha Pratah Smaranam in Kannada / ಗಣೇಶ ಪ್ರಾತಃ ಸ್ಮರಣಮ್

ನಮ್ಮ ಹಿಂದೂ ಸಂಪ್ರದಾಯದಲ್ಲಿ ಪ್ರತಿದಿನ ಮುಂಜಾನೆ ಎದ್ದು ದೇವರ ಪ್ರಾರ್ಥನೆ ಮಾಡುವುದು ಸಾಮಾನ್ಯವಾದ ಅಭ್ಯಾಸ. ಪ್ರಾತಃ ಕಾಲದಲ್ಲಿ ಸ್ಮರಣೆ ಮಾಡಲೆಂದೇ ಶಂಕರಾಚಾರ್ಯರು ಹಲವು ದೇವರ ಪ್ರಾತಃ ಸ್ಮರಣ ಸ್ತೋತ್ರವನ್ನು ರಚಿಸಿದ್ದಾರೆ. ಮುಂದಿನ ಹಲವು ದಿನಗಳಲ್ಲಿ ಎಲ್ಲ ಸ್ತೋತ್ರಗಳನ್ನು ಇಲ್ಲಿ ಪ್ರಕಟಿಸುತ್ತೇನೆ. ಕೆಳಗೆ ಗಣೇಶ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio link by Bangalore Sisters (Song 1)

2.Audio Link by Shweta Pandit

3.Audio Link by Prakash Rao

4.Audio Link by Soma Singh

August 16, 2009

Ganesha Sahasranama in Kannada / ಗಣೇಶ ಸಹಸ್ರನಾಮ ಸ್ತೋತ್ರ

ಗಣೇಶ ಚತುರ್ಥಿ ಬರುತ್ತಾ ಇದೆ. ಎಲ್ಲರ ಮನೆಯಲ್ಲೂ ಸಡಗರದಿಂದ ತಯಾರಿ ಆಗುತ್ತ ಇದೆ ಅಂತ ಕಾಣುತ್ತೆ. ಗಣೇಶ ಇನ್ನೊಂದು ಸ್ತೋತ್ರ, ಗಣೇಶ ಸಹಸ್ರನಾಮ ಇಲ್ಲಿದೆ. ಇದು ಲಲಿತ/ವಿಷ್ಣು ಸಹಸ್ರನಾಮದಷ್ಟು ಜನಪ್ರಿಯವಿಲ್ಲ. ಕೆಲವರು ಇದನ್ನ ಕೇಳಿಯೇ ಇಲ್ಲದಿರಬಹುದು. ಹಾಗಾಗಿ ಇದನ್ನು ನಿಮ್ಮೆಲ್ಲರ ಜೊತೆ ಹಂಚಿಕೊಳ್ಳೋಣ ಅಂತ ಇಲ್ಲಿ ಪ್ರಕಟಿಸಿದ್ದೀನಿ.
ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.
Pages 1 - 4

Pages 5 - 8

Audio of Ganesha Sahasranamam below:

1.AudioLink - N.S.Prakash Rao

2.AudioLink - P.B.Srinivas

3.AudioLink - Sri VidyaBhushana

June 17, 2009

Sankashtahara Chaturthi / Sankashta Chauthi Vrata / ಸಂಕಷ್ಟಹರ ಚತುರ್ಥಿ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

----------------------------------------------------------------------------

ಸಂಕಷ್ಟಹರ ಚತುರ್ಥಿ ವ್ರತ - ಹೆಸರೇ ಹೇಳುವಂತೆ ಸಂಕಷ್ಟಗಳನ್ನು ಹರಣ/ಪರಿಹಾರ ಮಾಡುವಂತ ವ್ರತ. ಸಂಕಷ್ಟ ಚೌತಿ ವ್ರತ / ಸಂಕಷ್ಟ ಗಣಪತಿ ವ್ರತ ಎಂದೂ ಕರೆಯುತ್ತಾರೆ. ವ್ರತದಲ್ಲಿ ಶ್ರೀ ವಿನಾಯಕನಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ/ಕೃಷ್ಣ ಪಕ್ಷದ ಚತುರ್ಥಿ ದಿನ ವ್ರತವನ್ನು ಮಾಡುತ್ತಾರೆ. ವ್ರತವನ್ನು ಶ್ರಾವಣ ಬಹುಳ ಚತುರ್ಥಿ ದಿನ ಪ್ರಾರಂಭ ಮಾಡಬೇಕು ಅಂತ ಇದೆ.

ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ಸಂಕಷ್ಟಹರ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು. ಗಣಪತಿ ಪೂಜೆಯನ್ನು ಚಂದ್ರನ ಪ್ರಕಾಶದಲ್ಲಿ ಮಾಡಬೇಕು. ಅದ್ದರಿಂದ ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು.

ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದ ಎಲೆ ಇಡಬೇಕು. ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ಕಲಶ ಸ್ಥಾಪನೆ ಚಿತ್ರ ಕೆಳಗಿದೆ.click on the image to enlarge



ಕಲಶ ಸ್ಥಾಪನೆ

ನೈವೇದ್ಯಕ್ಕೆ ಕರಿಗಡುಬು, ಮೋದಕ ಮಾಡಬೇಕು. ಮೈದಾ ಹಿಟ್ಟು ,ರವೆಯನ್ನು ಕಲಸಿ ಕಣಕ (dough) ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣ 2 ತರಹ ಮಾಡುತ್ತಾರೆ - dry (ಕೊಬ್ಬರಿ ತುರಿ, ಸಕ್ಕರೆ ,ಏಲಕ್ಕಿ) ಅಥವಾ wet (ಬೆಲ್ಲ,ಕಾಯಿ ತುರಿ, ಏಲಕ್ಕಿ). ಈ ಹಬ್ಬಕ್ಕೆ ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ 10 ಕರಿಗಡುಬು 10 ಮೋದಕಗಳನ್ನು ಮಾಡಿಕೊಳ್ಳಬೇಕು.
ಪೂಜೆಯ ನಂತ 5 ಕಡುಬು, 5 ಮೋದಕ ದಾನ ಮಾಡಿ, ಉಳಿದ 5 ಕಡುಬು, ಮೋದಕ ನೀವು ಪ್ರಸಾದವಾಗಿ ಸ್ವೀಕರಿಸಿ. ಹತ್ತಕ್ಕಿಂತ ಜಾಸ್ತಿ , ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು :)

ಚಂದ್ರೋದಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

1.Moonrise and Moonset time

2.Moonrise and Moonset calculator

ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು. ಕಲಶ ಸ್ಥಾಪಿಸಿ , ಜೊತೆಗೆ ಗಣಪತಿ ಪಟ, ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಕರಿಗಡುಬು, ಮೋದಕವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಊಟ ಮಾಡಬಹುದು.

ನಮ್ಮ ಮನೆಯಲ್ಲಿ ಸಂಕಷ್ಟಹರ ಚತುರ್ಥಿ ಪೂಜೆ
(click on the image to enlarge)

ಸಂಕಷ್ಟಹರ ಗಣಪತಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:

Vrata + Kathe Audio Link


ಪೂಜೆಯ ನಂತರ 5 ಕರಿಗಡುಬು, 5 ಮೋದಕ ಮತ್ತು ಉಪಾಯಿನ ದಾನ, ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯಿರಿ. ಹೀಗೆ ೨೧ ಸಾರಿ ವ್ರತಗಳನ್ನು ಆಚರಿಸಿ ನಂತರ ಉದ್ಯಾಪನ ಮಾಡುತ್ತಾರೆ. ನಿಮ್ಮ ಇಚ್ಛೆ , ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿ ಎಷ್ಟು ಸಾರಿ ಬೇಕಾದರೂ ವ್ರತವನ್ನು ಆಚರಿಸಬಹುದು.
ಗಣಪತಿಯು ನಿಮ್ಮ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ :)

ಅಂಗಾರಕ ಸಂಕಷ್ಟ ಚತುರ್ಥಿ / ಅಂಗಾರಕಿ ಸಂಕಷ್ಟ ಚತುರ್ಥಿ
ಅಂಗಾರಕ ಎಂದರೆ ಮಂಗಳ ಗ್ರಹ . ಹೀಗಾಗಿ ಮಂಗಳ ವಾರ ಬರುವ ಸಂಕಷ್ಟ ಚತುರ್ಥಿಗೆ ಈ ಹೆಸರು. ಇದು ಅಪರೂಪ. ವರ್ಷದಲ್ಲಿ ಒಂದು - ಎರಡು ಬಾರಿ ಬರಬಹುದು ಅಷ್ಟೇ. ಅಂಗಾರಕ ಸಂಕಷ್ಟ ಚತುರ್ಥಿ ಹೆಚ್ಚು ವಿಶೇಷ. ಈ ದಿನ ಪೂಜೆ ಮಾಡಿದರೆ ಶ್ರೇಷ್ಟ ಎಂಬ ನಂಬಿಕೆ.


ಗಣಪತಿ ಹಾಡು/ ಸ್ತೋತ್ರಗಳು:


5.Ganesha Sahasranama
6.Ganesha Pratah Smarana Stotra

August 31, 2008

Ganesha Chaturthi/ Ganesha Habba/ ಶ್ರೀ ವರಸಿದ್ಧಿ ವಿನಾಯಕ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

------------------------------------------------------------------------------------
ಶ್ರೀ ವರಸಿದ್ಧಿ ವಿನಾಯಕ ವ್ರತ / ಗಣೇಶ ಹಬ್ಬವನ್ನು ಭಾದ್ರಪದ ಮಾಸದ ಶುಕ್ಲ ಪಕ್ಷದ ಚತುರ್ಥಿ ದಿನ ಆಚರಿಸುತ್ತಾರೆ. ಈ ದಿನ ಮಂಗಳ ಸ್ನಾನ ಮಾಡಿ, ಪೂಜಗೃಹ ಅಥವಾ ದೇವರು ಇಡುವ ಜಾಗವನ್ನು ಮಾವಿನ ಸೊಪ್ಪು ಬಾಳೆಕಂದು, ರಂಗೋಲಿಯಿಂದ ಅಲಂಕರಿಸುತ್ತಾರೆ. ಅವರ ಮನೆಯ ಪದ್ಧತಿ ಪ್ರಕಾರ ಮಣ್ಣಿನ ಗಣಪತಿ / ಬೆಳ್ಳಿ ಗಣಪತಿ ವಿಗ್ರಹ ಇಟ್ಟು ಪೂಜೆ ಮಾಡುತ್ತಾರೆ.

ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಜೊತೆಗೆ ಕಲಶ, ಜನಿವಾರ, ಹತ್ತಿ ಎಳೆ, ಹುಲ್ಲಿನ ಗರಿಕೆ ಬೇಕಾಗುತ್ತೆ. ಮೊದಲು ಮನೆಯ ಗಣಪತಿಗೆ ಪೂಜೆ ಮಾಡಿ ನಂತರ ದೊಡ್ಡ ಗಣಪತಿಗೆ ಪೂಜೆ ಮಾಡಬೇಕು. ಗಣಪತಿಗೆ 21 ಹಿಡಿ 21 ಎಳೆಗಳ ಹತ್ತಿ ಹಾರ ಹಾಕಬೇಕು.ನೈವೇದ್ಯಕ್ಕೆ ಸಾಮಾನ್ಯವಾಗಿ 21 ಕಡುಬು, ಮೋದಕ ಮಾಡುತ್ತಾರೆ. ತಿಂಡಿ ಪ್ರಿಯನಾದ ಗಣಪತಿಗೆ ಇದರೊಂದಿಗೆ ಬಗೆಬಗೆಯ ತಿಂಡಿಗಳನ್ನು ನೈವೇದ್ಯಕ್ಕೆ ಮಾಡುತ್ತಾರೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು.
ಗೌರಿ ಗಣೇಶ ಹಬ್ಬ

ಗಣಪತಿ ಹಬ್ಬದ ಚಂದ್ರನನ್ನು ನೋಡಬಾರದು ಅಂತ ಇದೆ. ನೋಡಿದರೆ ನಿಮ್ಮ ಮೇಲೆ ಮಿಥ್ಯಾಪವಾದ ಬರುತ್ತೆ ಅಂತ ಹೇಳುತ್ತಾರೆ. ಒಂದು ವೇಳೆ ಅಕಸ್ಮಾತ್ ಚಂದ್ರದರ್ಶನ ಮಾಡಿದಲ್ಲಿ, ಅದರ ದೋಷ ಪರಿಹಾರಕ್ಕಾಗಿ ಸ್ಯಮಂತಕೋಪಾಖ್ಯಾನವನ್ನು(ಶಮಂತಕ ಮಣಿ ಕಥೆ) ಶ್ರವಣ ಮಾಡಿ, ಈ ಶ್ಲೋಕವನ್ನು ಪಠಿಸಬೇಕು.

ಸಿಂಹಃ ಪ್ರಸೇನಮವಧೀತ್ ಸಿಂಹೋ ಜಾಂಬವತಾ ಹತಃ |
ಸುಕುಮಾರಕ ಮಾರೋಧಿಃ ತವಹ್ಯೇಷಃ ಸ್ಯಮಂತಕಃ ||


ಸ್ನೇಹಿತರೇ ಈ ವರ್ಷ ಜೋಕೆಯಾಗಿ ಇರಿ ಆಯಿತಾ :)

ವರ ಸಿದ್ಧಿ ವಿನಾಯಕ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು-
Varasiddhi Vinayaka Vrata + Kathe Audio link by Ganapathi Shastri (kannada audio)[needs real player]

Varasiddhi Vinayaka Vrata + Kathe Audio Link by Ganapathi Shastri (updated Aug 2018)
Varasiddhi Vinayaka Vrata + Kathe Audio Link by Raghavan Shastri


ಗಣಪತಿ ಪೂಜೆ

ಹಬ್ಬ ಆದ ಮೇಲೆ ಒಂದು ಒಳ್ಳೆಯ ದಿನ ನೋಡಿ ದೇವರನ್ನು ವಿಸರ್ಜನೆ ಮಾಡಬೇಕು. ಕೆಲವೊಮ್ಮೆ ಹಬ್ಬದ ದಿನವೇ ಮಾಡಬಹುದು, ಕೆಲವೊಮ್ಮೆ ಹೆಚ್ಚು ದಿನಗಳು ದೇವರನ್ನು ಮನೆಯಲ್ಲಿ ಇಟ್ಟುಕೊಂಡಿರುತ್ತಾರೆ. ಮಣ್ಣಿನ ಗಣೇಶನನ್ನು ನೀರಿನಲ್ಲಿ ಮುಳುಗಿಸಿ ವಿಸರ್ಜನೆ ಮಾಡುತ್ತಾರೆ. "ಗಣೇಶ ಬಂದ, ಹೊಟ್ಟೆ ಮೇಲೆ ಗಂಧ, ಕಾಯಿ ಕಡುಬು ತಿಂದ , ಚಿಕ್ಕ ಕೆರೇಲಿ ಬಿದ್ದ , ದೊಡ್ಡ ಕೆರೇಲಿ ಎದ್ದ " ಅಂತ ಹೇಳಿಕೊಂಡು ಗಣಪತಿಯನ್ನು ನೀರಲ್ಲಿ ಮುಳುಗಿಸುವುದು:)

ಗಣಪತಿ ಹಾಡು/ ಸ್ತೋತ್ರಗಳು:


ವರಸಿದ್ಧಿ ವಿನಾಯಕ ನಿಮ್ಮ ಎಲ್ಲ ಕಾರ್ಯಗಳನ್ನು ಸಿದ್ಧಿಸಲಿ :)

Related Link:
Songs on lord Ganesha with lyrics
Swarna Gowri Vratha

July 13, 2008

Vinayaka Ashtottara in Kannada / ವಿನಾಯಕ ಅಷ್ಟೋತ್ತರ

ಯಾವಾಗಲು ವಿನಾಯಕನಿಗೆ ಮೊದಲು ಪೂಜೆ. ಎಲ್ಲ ವಿಘ್ನಗಳನ್ನು ತೊಡೆದು ಹಾಕಿ ನಮ್ಮ ಕಾರ್ಯವನ್ನು ಸಿಧ್ಧಿ ಮಾಡು ಎಂದು ವಿಘ್ನೇಶ್ವರನಲ್ಲಿ ಪ್ರಾರ್ಥಿಸುತ್ತೇವೆ. ಕೆಳಗೆ ಗಣೇಶ ಅಷ್ಟೋತ್ತರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ

Ganesha Ashtottara ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು :


Audio Link by Prakash Rao

May 11, 2008

Ganesha Pancharatna in Kannada / ಶ್ರೀ ಗಣೇಶ ಪಂಚರತ್ನ ಸ್ತೋತ್ರ


ಶ್ರೀ ಗಣೇಶ ಪಂಚರತ್ನ ಸ್ತೋತ್ರ ಚಿಕ್ಕದಾಗಿದ್ದು, ಕಲಿಯಲು ಸುಲಭವಾಗಿದೆ, ಮಕ್ಕಳಿಗೂ ಹೇಳಿ ಕೊಡಬಹುದು. ನಾನೂ ಇದನ್ನು ಚಿಕ್ಕವಳಿದ್ದಾಗಲೇ ಕಲಿತದ್ದು :) ಇದು ಶ್ರೀ ಶಂಕರಾಚಾರ್ಯ ವಿಚರಿತ ಸ್ತೋತ್ರ. ಇದನ್ನು M.S.Subbalakshmi ಅವರು ಸುಮಧುರವಾಗಿ ಹಾಡಿದ್ದಾರೆ.ಪಂಚರತ್ನದ ಧ್ವನಿ ಮುದ್ರಣ (audio) ಇಲ್ಲಿ ಕೇಳಬಹುದು.



1.Audio Link - M.S.Subbalakshmi ಅವರು ಹಾಡಿದ್ದಾರೆ.



2.AudioLink - Sawani Shinde ಅವರು ಹಿಂದುಸ್ತಾನಿ ಶೈಲಿಯಲ್ಲಿ ಹಾಡಿದ್ದಾರೆ.



ಇದನ್ನು kannadaaudio.com ಇಂದ ತೆಗೆದುಕೊಂಡಿದ್ದೀನಿ.
Blog Widget by LinkWithin