Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label :Navagraha. Show all posts
Showing posts with label :Navagraha. Show all posts

September 29, 2013

Navagraha Ashtottara Series - Mangala (Angaraka) Ashtottara in Kannada / ಅಂಗಾರಕ ಅಷ್ಟೋತ್ತರ

ನವಗ್ರಹ ಅಷ್ಟೋತ್ತರಗಳ ಸರಣಿಯಲ್ಲಿ ಇದು ಮುಂದಿನ ಅಷ್ಟೋತ್ತರ. ಮಂಗಳ ಅಷ್ಟೋತ್ತರ ಅಥವಾ ಅಂಗಾರಕ ಅಷ್ಟೋತ್ತರ ಇಲ್ಲಿದೆ.



Right click on the image and open in new tab to enlarge

1.Audio Link - song 7

2.Audio Link


February 28, 2013

Navagraha Ashtottara Series - Chandra Ashtottara in Kannada / ಚಂದ್ರ ಅಷ್ಟೋತ್ತರ

ಬಹಳ ದಿನಗಳ ನಂತರ ಹೊಸ ಸ್ತೋತ್ರವನ್ನು ಬರೆಯಲು ಸಮಯ ಸಿಕ್ಕಿತು. ಎಲ್ಲಾ ನವಗ್ರಹ ಅಷ್ಟೋತ್ತರಗಳನ್ನು ಪ್ರಕಟಿಸಲು ಪ್ರಯತ್ನಿಸುತ್ತೇನೆ. ಚಂದ್ರ ಅಷ್ಟೋತ್ತರ ಇಲ್ಲಿದೆ.


Right click on the image and open in new tab to enlarge

1.Audio Link

2.Audio Link

January 25, 2012

Navagraha Ashtottara Series - Surya Ashtottara in Kannada / ಸೂರ್ಯ ಅಷ್ಟೋತ್ತರ

ಬಹಳಷ್ಟು ಓದುಗರು ನವಗ್ರಹ ಅಷ್ಟೋತ್ತರಗಳನ್ನು ಪ್ರಕಟಿಸಿ ಅಂತ ಕೇಳಿದ್ದರೆ. ಮುಂದಿನ ವಾರಗಳಲ್ಲಿ ನಾನು ಎಲ್ಲ ನವಗ್ರಹಗಳ ಅಷ್ಟೋತ್ತರ ಸರಮಾಲೆಯನ್ನು ಇಲ್ಲಿ ಬರೆಯುತ್ತೀನಿ. ಮೊದಲನೆಯದಾಗಿ  ಸೂರ್ಯ ಅಷ್ಟೋತ್ತರ ಇಲ್ಲಿದೆ. ಸಧ್ಯದಲ್ಲೇ ರಥ ಸಪ್ತಮಿ ಹಬ್ಬ ಬರುತ್ತಿದೆ, ಅದಕ್ಕೂ ಈ ಸ್ತೋತ್ರ ಉಪಯುಕ್ತ.

August 2, 2010

Surya Pratah Smarana Stotra / ಸೂರ್ಯ ಪ್ರಾತಃ ಸ್ಮರಣ ಸ್ತೋತ್ರ

ಕೆಳಗೆ ಸೂರ್ಯ ಪ್ರಾತಃ ಸ್ಮರಣ ಸ್ತೋತ್ರ ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


1.Audio Link by Ravindra Sathe[song 6]

2.Audio Link by Shubha Mudgal[song 2]

February 27, 2010

Aditya Hrudayam in Kannada / ಆದಿತ್ಯ ಹೃದಯಮ್

ಆದಿತ್ಯ ಹೃದಯ ಸ್ತೋತ್ರ ಸೂರ್ಯನ ಸ್ತೋತ್ರ. ಸ್ತೋತ್ರವು ರಾಮಾಯಣದ ಯುದ್ಧ ಕಾಂಡದಲ್ಲಿ ಬರುತ್ತದೆ. ಶ್ರೀ ರಾಮನು ರಾವಣನ ಮೇಲೆ ಯುದ್ಧ ಮಾಡುವ ಮುನ್ನ ಋಷಿ ಅಗಸ್ತ್ಯರು ರಾಮನಿಗೆ ಸ್ತೋತ್ರವನ್ನು ಪಠಿಸುತ್ತಾರೆ. ಸ್ತೋತ್ರದಿಂದ ಸೂರ್ಯನನ್ನು ಪ್ರಾರ್ಥನೆ ಮಾಡಿ, ಅವನಿಂದ ಅಪಾರ ಶಕ್ತಿ, ಬಲ ಪಡೆದು ಶತ್ರುವನ್ನು ಸೋಲಿಸುತ್ತಾರೆ.
ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

1.Audio link by S.P.Balasubramanyam

2. Audio link by Purushottama Sai (song starts at 2.00 minutes)

3. Audio by Sulamagala Sisters below




4.Audio by another artist(prapatti.com)


February 16, 2010

Navagraha Peeda hara Stotram in Kannada / ನವಗ್ರಹ ಪೀಡಾ ಪರಿಹಾರ ಸ್ತೋತ್ರಂ


ಗ್ರಹಾಣಾಮಾದಿರಾದಿತ್ಯೋ ಲೋಕರಕ್ಷಣಕಾರಕಃ
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ರವಿಃ ೧

ರೋಹಿಣೀಶಃ ಸುಧಾಮೂರ್ತಿಃ ಸುಧಾಗಾತ್ರಃ ಸುಧಾಶನಃ
ವಿಷಮಸ್ಥಾನಸಂಭೂತಾಂ ಪೀಡಾಂ ಹರತು ಮೇ ವಿಧುಃ ೨

ಭೂಮಿಪುತ್ರೋ ಮಹಾತೇಜಾ ಜಗತಾಂ ಭಯಕೃತ್ ಸದಾ
ವೃಷ್ಟಿಕೃದ್ ವೃಷ್ಟಿಹರ್ತಾ ಚ ಪೀಡಾಂ ಹರತು ಮೇ ಕುಜಃ ೩

ಉತ್ಪಾತರೂಪೋ ಜಗತಾಂ ಚಂದ್ರಪುತ್ರೋ ಮಹಾದ್ಯುತಿಃ
ಸೂರ್ಯಪ್ರಿಯಕರೋ ವಿದ್ವಾನ್ ಪೀಡಾಂ ಹರತು ಮೇ ಬುಧಃ ೪

ದೇವಮಂತ್ರೀ ವಿಶಾಲಾಕ್ಷಃ ಸದಾ ಲೋಕಹಿತೇ ರತಃ
ಅನೇಕಶಿಷ್ಯಸಂಪೂರ್ಣಃ ಪೀಡಾಂ ಹರತು ಮೇ ಗುರುಃ ೫

ದೈತ್ಯಮಂತ್ರೀ ಗುರುಸ್ತೇಷಾಂ ಪ್ರಾಣದಶ್ಚ ಮಹಾಮತಿಃ
ಪ್ರಭುಸ್ತಾರಾಗ್ರಹಾಣಾಂ ಚ ಪೀಡಾಂ ಹರತು ಮೇ ಭೃಗುಃ ೬

ಸೂರ್ಯಪುತ್ರೋ ದೀರ್ಘದೇಹೋ ವಿಶಾಲಾಕ್ಷಃ ಶಿವಪ್ರಿಯಃ
ಮಂದಚಾರಃ ಪ್ರಸನ್ನಾತ್ಮಾ ಪೀಡಾಂ ಹರತು ಮೇ ಶನಿಃ ೭

ಮಹಾಶಿರಾ ಮಹಾವಕ್ತ್ರೋ ದೀರ್ಘದಂಷ್ಟ್ರೋ ಮಹಾಬಲಃ
ಅತನುಶ್ಚೋರ್ಧ್ವಕೇಶಶ್ಚ ಪೀಡಾಂ ಹರತು ಮೇ ಶಿಖೀ ೮

ಅನೇಕರೂಪವರ್ಣೈಶ್ಚ ಶತಶೋಥ ಸಹಸ್ರಶಃ
ಉತ್ಪಾತರೂಪೋ ಜಗತಾಂ ಪೀಡಾಂ ಹರತು ಮೇ ತಮಃ ೯

ಇತಿ ನವಗ್ರಹ ಪೀಡಾಹರ ಸ್ತೋತ್ರಂ ಸಂಪೂರ್ಣಮ್


1.Audio Link by Vedavalli(raaga)

2.Audio Link by Vedavalli(hummaa)

3.Audio link by R.Vedavalli below:

March 9, 2009

Navagraha Stotram in Kannada / ನವಗ್ರಹ ಸ್ತೋತ್ರ

ನವಗ್ರಹ ಸ್ತೋತ್ರ - 1


ಓಂ ನಮಃ ಸೂರ್ಯಾಯ ಚಂದ್ರಾಯ ಮಂಗಳಾಯ ಬುಧಾಯ ಚ


ಗುರು ಶುಕ್ರ ಶನಿಭ್ಯಶ್ಚ ರಾಹವೇ ಕೇತವೇ ನಮಃ ||

ನವಗ್ರಹ ಸ್ತೋತ್ರ - 2

ನವಗ್ರಹಗಳ ಇನ್ನೊಂದು ಸ್ತೋತ್ರ ಇದು. ಸ್ತೋತ್ರ ಕನ್ನಡದಲ್ಲಿದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ನವಗ್ರಹ ಸ್ತೋತ್ರದ ಧ್ವನಿಮುದ್ರಣ ಇಲ್ಲಿದೆ:


1.AudioLink - P.B.Sreenivas ಹಾಡಿದ್ದಾರೆ (Song 9)


2.AudioLink - Trichur Ramachandran ಹಾಡಿದ್ದಾರೆ


3.AudioLink - Vedavalli ಹಾಡಿದ್ದಾರೆ

January 31, 2009

Ratha Saptami Festival / ರಥ ಸಪ್ತಮೀ ಹಬ್ಬ



ರಥ ಸಪ್ತಮಿ ಹಬ್ಬವನ್ನು ಮಾಘ ಮಾಸದ ಶುಕ್ಲ ಪಕ್ಷದ ಸಪ್ತಮೀ ದಿನ ಆಚರಿಸುತ್ತಾರೆ. ಇದು ಸೂರ್ಯ ದೇವನ ಹಬ್ಬ. ಸೂರ್ಯನು ಸಿಂಹ ರಾಶಿಯ ಅಧಿಪತಿ. ಸೂರ್ಯನು ಧನಸ್ಸು ರಾಶಿ ಇಂದ ಮಕರ ರಾಶಿಗೆ ಪ್ರವೇಶಿಸುತ್ತಾನೆ, ತನ್ನ ಏಳು ಕುದುರೆಗಳ ರಥ ಏರಿ ಹೋಗುತ್ತಾನೆ. ಈ ದಿನ ಅರುಣೋದಯದ ಕಾಲದಲ್ಲಿ ಸ್ನಾನ ಮಾಡಿ , ಸೂರ್ಯನಿಗೆ ಪೂಜೆ ಮಾಡುತ್ತಾರೆ.ಸ್ನಾನ ಮಾಡುವಾಗ ಎಕ್ಕದ ಗಿಡದ 7ಎಲೆಗಳನ್ನು ನೆತ್ತಿ/ತಲೆ, ಭುಜ, ತೊಡೆ ಮೇಲೆ ಇಟ್ಟುಕೊಂಡು ಸ್ನಾನ ಮಾಡುತ್ತಾರೆ. ಎಕ್ಕದ ಗಿಡ ಹೇಗಿರುತ್ತೆ ಅಂತಗೊತ್ತಿಲ್ಲದವರಿಗೆ, ಕೆಳಗೆ ಎಕ್ಕದ ಗಿಡದ ಚಿತ್ರ ಇದೆ.

ಎಕ್ಕದ ಗಿಡ
ಕೆಳಗಿರುವ ಮಂತ್ರವನ್ನು ಹೇಳಿಕೊಂಡು ಸ್ನಾನ ಮಾಡಬೇಕು ಬೇಕು.



ಸ್ನಾನದ ನಂತರ ಸೂರ್ಯನಿಗೆ ಅಷ್ಟೋತ್ತರ, ನೈವೇದ್ಯದಿಂದ ಪೂಜೆ ಮಾಡುತ್ತಾರೆ. ಪೂಜಾ ವಿಧಾನ ಇಲ್ಲಿದೆ. ಸೂರ್ಯನಿಗೆ ಪ್ರಿಯವಾದ ಗೋಧಿ/ರವೆ ಪಾಯಸ ನೈವೇದ್ಯ. ದಿನ ಪೂಜೆ ಮಾಡಿ ಸೂರ್ಯನಿಗೆ ನಮಸ್ಕಾರ ಮಾಡಿದಲ್ಲಿ ಎಲ್ಲ ಪಾಪಗಳೂ ಪರಿಹಾರವಾಗುತ್ತವೆ ಎಂಬ ನಂಬಿಕೆ.

ರಥ ಸಪ್ತಮಿ ಬಹಳ ಶುಭಕರವಾದ ದಿನ. ಹೀಗಾಗಿ ದಿನ ಮದುವೆ, ಮುಂಜಿ, ಗುದ್ದಲಿ ಪೂಜೆ, ಗೃಹಪ್ರವೇಶ, ನಾಮಕರಣ ಮುಂತಾದ ಮಂಗಳ ಕಾರ್ಯಗಳನ್ನು ಮಾಡುತ್ತಾರೆ. ಸೂರ್ಯನು ರಥವನ್ನೇರಿ ಮೇಲೆ ಹೋದಂತೆ ನಮ್ಮ ಕಾರ್ಯಗಳಲ್ಲಿ, ಬಾಳಲ್ಲಿ ನಾವೂ ಯಶಸ್ಸು ಪಡೆಯುತ್ತೀವಿ ಎಂಬ ನಂಬಿಕೆ.ಸೂರ್ಯ ದೇವರ ಸ್ತೋತ್ರಗಳು ಇಲ್ಲಿದೆ:

1.Surya Ashtakam[song 11]

2.Surya Ashtottara

3.Surya Pratah Smarana Stotra

ಸೂರ್ಯನ ಕಿರಣದಂತೆ ನಿಮ್ಮ ಬಾಳೂ ಉಜ್ವಲವಾಗಲಿ :)

November 26, 2008

Navagraha Dhanya & Mandala / ನವಗ್ರಹ ಧಾನ್ಯಗಳು +ಮಂಡಲ

ನವಗ್ರಹ ಧಾನ್ಯಗಳನ್ನು ನವಗ್ರಹ ಹೋಮ/ಶಾಂತಿ , ಸತ್ಯನಾರಾಯಣ ಪೂಜೆಗಳಲ್ಲಿ ಉಪಯೋಗಿಸುತ್ತಾರೆ. ಕೆಳಗೆ ನವ ಧಾನ್ಯಗಳ ಹೆಸರು, ಯಾವ ಗ್ರಹಕ್ಕೆ ಯಾವ ಧಾನ್ಯ, ಯಾವ ದಿಕ್ಕಿಗೆ ಯಾವ ಧಾನ್ಯ ಇಡಬೇಕು ಎಂಬ ವಿವರಗಳಿವೆ.
ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



ನವಗ್ರಹ ಧಾನ್ಯಗಳು / navagraha dhaanya /grains / seeds
  1. ಕಡಲೆ ಕಾಳು - Bengal gram (black Chickpeas)(North)
  2. ಉದ್ದಿನ ಕಾಳು - whole urad dal / black gram(SouthWest)
  3. ಹೆಸರು ಕಾಳು - Green gram/ whole moong bean(NorthEast)
  4. ಹುರಳಿ ಕಾಳು - Horse gram(NorthWest)
  5. ತೊಗರಿ ಬೆಳೆ - Toor Dal(South)
  6. ಭತ್ತ - Rice grain with husk (SouthEast)
  7. ಗೋಧಿ - wheat grain (Center)
  8. ಎಳ್ಳು - Black Sesame seeds (West)
  9. ಅವರೇಕಾಳು - Indian Flat beans/AvarekaaLu/Papdi lilva (East)
  10. ಬಟ್ಟಲು ಅಡಿಕೆ - Betel Nut /Arecanut (North East)
  11. ಬೆಲ್ಲದ ಅಚ್ಚು - 1 Jaggery Block/Mould /Jaggery square (North East)
  12. ನವಗ್ರಹ ಮಂಡಲ
    ದಿಕ್ಕು / Direction
    1. ಪೂರ್ವ - East
    2. ಪಶ್ಚಿಮ - West
    3. ಉತ್ತರ - North
    4. ದಕ್ಷಿಣ - South
    5. ವಾಯವ್ಯ - North West
    6. ಈಶಾನ್ಯ - North East
    7. ನೈಋತ್ಯ - South West
    8. ಆಗ್ನೇಯ - South East
    Related Links: Satyanarayana Pooja Vidhana
Blog Widget by LinkWithin