Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks
Showing posts with label :Guru/Dattatreya. Show all posts
Showing posts with label :Guru/Dattatreya. Show all posts

December 20, 2010

Guru Charitre Song in Kannada/ Condensed Gurucharitre/ಸಂಕ್ಷಿಪ್ತ ಗುರುಚರಿತ್ರೆ/ಗುರುಚರಿತ್ರೆ ಹಾಡು


ಈ ದಿನ ದತ್ತ ಜಯಂತಿ. ದತ್ತಾತ್ರೇಯರ ಜೀವನ, ಮಹಿಮೆಗಳನ್ನು ಗುರು ಚರಿತ್ರೆ ಪುಸ್ತಕವು 52 ಅಧ್ಯಾಯಗಳಲ್ಲಿ ವಿಸ್ತಾರವಾಗಿ ವಿವರಿಸುತ್ತದೆ. ಅಷ್ಟೊಂದು ದೊಡ್ಡ ಪುಸ್ತಕವನ್ನು ಇಲ್ಲಿ ಪ್ರಕಟಿಸಲು ಸಾಧ್ಯವಿಲ್ಲ. ಹಾಗೂ ಅದನ್ನು ಓದಲು ವಾರಗಳು,ತಿಂಗಳುಗಳು ಬೇಕು. ನನ್ನ ಬಳಿ ಗುರುಚರಿತ್ರೆಯ ಸಾರಾಂಶವನ್ನು ಹೇಳುವ ಒಂದು ಚಿಕ್ಕ ಹಾಡು ಇದೆ. ಅದನ್ನು ಇಲ್ಲಿ ಪ್ರಕಟಿಸುತ್ತಿದ್ದೀನಿ. ಇದು ಚಿಕ್ಕದಾಗಿದ್ದು, ಹೇಳಲು ಕೆಲವೇ ನಿಮಿಷಗಳು ಸಾಕು. ಈ ಸಂಕ್ಷಿಪ್ತ ಗುರುಚರಿತ್ರೆಯನ್ನು ಈ ದಿನ ಹೇಳಿ, ಗುರುಗಳ ಅನುಗ್ರಹಕ್ಕೆ ನಾವೆಲ್ಲ ಪಾತ್ರರಾಗೋಣ.

ಕೆಳಗೆ ಗುರುಚರಿತ್ರೆ ಹಾಡು ಇದೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.


ಗುರು ದತ್ತಾತ್ರೇಯರ ಹಾಡುಗಳು:
ಗುರು ದತ್ತಾತ್ರೇಯರ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ:)

July 6, 2009

Guru Poornima / Vyasa Poornima /ಗುರು ಪೂರ್ಣಿಮಾ / ವ್ಯಾಸ ಪೂರ್ಣಿಮಾ


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ


ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆಯನ್ನು ಆಷಾಢ ಮಾಸದ ಪೂರ್ಣಿಮೆಯ ದಿನ ಆಚರಿಸುತ್ತಾರೆ. ಇಂದು ವೇದ ವ್ಯಾಸರ ಜನ್ಮ ದಿನ. ಇವರು ೪ ವೇದಗಳನ್ನು ಸಂಕಲನ ಮಾಡಿದರು ಎಂಬ ನಂಬಿಕೆ. ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೇಶ. ಈ ಗುರಿಯನ್ನು ತಲುಪುವುದಕ್ಕೆ ವೇದಗಳು ಪ್ರಮುಖ ಪಾತ್ರ ಹೊಂದಿದೆ. ಈ ವೇದಗಳನ್ನು ನಮಗೆ ಕೊಟ್ಟಿರುವ ವೇದ ವ್ಯಾಸರು ಧರ್ಮ ಗುರುಗಳು. ಇವರಿಗೆ ನಮ್ಮ ಅನಂತ ನಮಸ್ಕಾರಗಳು.

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಪೂರ್ಣಿಮೆಯ ದಿನ ಚಂದ್ರನು ಪ್ರಕಾಶಮಾನ ಆಗಿರುತ್ತಾನೆ. ಚಂದ್ರನಂತೆ ಪ್ರಕಾಶಿಸುತ್ತಿರುವ ಗುರುವು ನಮ್ಮ ಬಾಳಲ್ಲಿರುವ ಅಂಧಕಾರವನ್ನು ತೊಲಗಿಸಿ , ಜ್ಞಾನದ ಬೆಳಕನ್ನು ಕೊಡುತ್ತಾನೆ ಎಂಬ ಸಂಕೇತವಾಗಿ ಈ ಗುರು ಪೂರ್ಣಿಮಾ ಹಬ್ಬವನ್ನು ಆಚರಿಸುತ್ತಾರೆ.

ಶಂಕರಾಚಾರ್ಯರು, ದತ್ತಾತ್ರೇಯರು, ರಾಘವೇಂದ್ರ ಸ್ವಾಮಿಗಳು, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ ,ಸಾಯಿ ಬಾಬರವರು, ಶ್ರೀ ರವಿಶಂಕರ - ಹೀಗೆ ಹಲವಾರು ಮಹಾಪುರುಷರು ಗುರು ಸ್ವರೂಪರಾಗಿ ನಮಗೆಲ್ಲ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಇಷ್ಟದಂತೆ ಗುರುಗಳನ್ನು ಅನುಸರಿಸುತ್ತಾರೆ. ಈ ದಿನ ಇಷ್ಟೊಂದು ಪ್ರಾಬಲ್ಯ, ಮಹಿಮೆ ಇರುವ ಗುರುಗಳಿಗೆ ನಮನಗಳನ್ನು ಸಲ್ಲಿಸುತ್ತಾರೆ. ಇದಲ್ಲದೇ ನಮ್ಮ ತಾಯಿ, ತಂದೆ, ಪಾಠ/ವಿದ್ಯೆ/ಸಂಗೀತ/ಕಲೆ ಹೇಳಿಕೊಟ್ಟಿರುವ ಗುರುಗಳು - ಇವರಿಗೂ ನಮಸ್ಕಾರಗಳನ್ನು ಸಲ್ಲಿಸಬೇಕು.

ಹಬ್ಬವನ್ನು ಆಚರಿಸುವುದಕ್ಕೆ ವಿಶೇಷವಾದ ಪೂಜೆ ಅಂತಿಲ್ಲ. ನಂಬಿರುವ ಗುರುಗಳ ಪೂಜೆ ಮಾಡುತ್ತಾರೆ. ಗುರುಗಳ ಧ್ಯಾನ, ಭಜನೆ ಮಾಡುತ್ತಾರೆ. ಕೆಲವರು ಸತ್ಸಂಗ ಏರ್ಪಡಿಸುತ್ತಾರೆ. ಹಲವು ಕಡೆ ಗುರುಗಳಿಗೆ ಸತ್ಕಾರ ಕಾರ್ಯಕ್ರಮ(felicitation) ಇರುತ್ತದೆ. ಒಟ್ಟಿನಲ್ಲಿ ಈ ದಿನ ಗುರುವಿನ ಸ್ಮರಣೆಗೆ ಮೀಸಲಾಗಿದೆ.


Useful Links:

ಗುರುಗಳು ನಮ್ಮೆಲರಿಗೂ ಜ್ಞಾನ ನೀಡಿ ಕಾಪಾಡಲಿ :)

May 18, 2009

Guru Stotra in Kannada / ಗುರು ಸ್ತೋತ್ರ / ಗುರು ವಂದನ

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಗುರು ವಿವೇಕ, ಪ್ರಜ್ಞೆ, ಬುದ್ಧಿವಂತಿಕೆ, ಜ್ಞಾನ, ತಿಳಿವಳಿಕೆ ಎಲ್ಲ ಹೊಂದಿರುವನು. ಒಂದು ಅಕ್ಷರ ಕಲಿಸಿದರೂ ಸಾಕು, ಅವನು ಗುರುವಿನ ಸ್ಥಾನ ಪಡೆಯುತ್ತಾನೆ. ನಮ್ಮ ತಾಯಿ, ತಂದೆ, ಬಂಧುಗಳು, ಹಿರಿಯರು, ಮಿತ್ರರು, ಶಿಕ್ಷಕರು ಇವರೆಲ್ಲರೂ ಗುರುಗಳೇ. ಗುರುವಿನ ಮಾರ್ಗದರ್ಶನ, ಗುರುವಿನಿಂದ ಪಡೆದ ಜ್ಞಾನವೇ ನಮ್ಮ ಸಾಧನಗಳು ಈ ಜೀವನದಲ್ಲಿ. ಇಂತಹ ಮಹಿಮೆ, ಪ್ರಭಾವ ಇರುವ ಗುರುವಿಗೆ ಈ ಗುರು ಸ್ತೋತ್ರದಲ್ಲಿ ಅನಂತ ನಮಸ್ಕಾರಗಳನ್ನು ಸಲ್ಲಿಸುತ್ತಿದ್ದೇವೆ. ಗುರು ಸ್ತೋತ್ರವು ಕನ್ನಡದಲ್ಲಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ ಮಾಡಿ.

AudioLink of Guru Stotram by Usha Seturaman

Audio Link by another artist

December 10, 2008

Dattatreya Jayanthi, Dattatreya Ashtottara in Kannada / ದತ್ತಾತ್ರೇಯ ಜಯಂತಿ , ದತ್ತಾತ್ರೇಯ ಅಷ್ಟೋತ್ತರ



ದತ್ತಾತ್ರೇಯ ಜಯಂತಿ ಮಾರ್ಗಶಿರ ಮಾಸದ ಹುಣ್ಣಿಮೆ/ಪೂರ್ಣಿಮಾ ದಿನ ಆಚರಿಸುತ್ತಾರೆ. ಗುರು ದತ್ತಾತ್ರೇಯರು ಬ್ರಹ್ಮ ,ವಿಷ್ಣು, ಮಹೇಶ್ವರ ತ್ರಿಮೂರ್ತಿಗಳು ಸೇರಿದ ಅವತಾರ. ಔದುಂಬರ ವ್ರಕ್ಷದಲ್ಲಿ ವಾಸ ಮಾಡುತ್ತಾರೆ. ಅತ್ರಿ ಮುನಿಗಳು ಹಾಗು ಅನಸೂಯ ದೇವಿಗೆತ್ರಿಮೂರ್ತಿಗಳು ಪುತ್ರರಾಗಿ ಜನಿಸಿದರು. ಇದರ ಹಿಂದೆ ಇರುವ ಕಥೆ ಹೀಗಿದೆ.
ಇಂದ್ರಾದಿ ದೇವತೆಗಳು, ನಾರದರು ಅನಸೂಯಾದೇವಿಯ ಪಾತಿವ್ರತೆಯನ್ನು ಹಾಡಿ ಹೊಗಳುತ್ತಿದ್ದರು. ಇದನ್ನು ಕೇಳಿದ ತ್ರಿಮೂರ್ತಿಗಳು, ತಾವೇ ಸ್ವತಃ ಹೋಗಿ ಅದನ್ನು ಕಣ್ಣಾರೆ ನೋಡುವ ಆಸೆ ಆಯಿತು. ಒಂದು ದಿನ ಮಧ್ಯಾಹ್ನ ಅತ್ರಿ ಮುನಿಗಳು ಮನೆಯಲ್ಲಿಲ್ಲದಿರುವಾಗ, ಬ್ರಹ್ಮ , ವಿಷ್ಣು ಮಹೇಶ್ವರರು ಬ್ರಾಹ್ಮಣವೇಷ ಧರಿಸಿ ಭಿಕ್ಷಾಂ ದೇಹಿ ಎಂದು ಹೇಳುತ್ತಾ ಅನುಯ ದೇವಿ ಮನೆಗೆ ಬಂದರು. ಆಕೆಯು ಸಂತಸದಿಂದ ಇವರನ್ನು ಬರಮಾಡಿಕೊಂಡು ಇವರಿಗೆ ಊಟಕ್ಕೆ ವ್ಯವಸ್ಥೆ ಮಾಡಲು ಹೊರಟಳು. ಅಡಿಗೆಯಾದ ನಂತರ ಇವರಿಗೆ ಊಟ ಬಡಿಸಲು ಬಂದಾಗ, ತ್ರಿಮೂರ್ತಿಗಳು " ನೀನು ಭಿಕ್ಷೆ ಬೇಡಿ ಬಂದವರಿಗೆ ಇಚ್ಛಾ ಭೋಜನ ಮಾಡಿಸುತ್ತೀಯ ಅಂತ ಕೇಳಿದ್ದೀವಿ. ನಮಗೆ ನೀನು ವಿವಸ್ತ್ರಳಾಗಿ ಊಟ ಬಡಿಸಿದರೆ ಮಾತ್ರ ಊಟ ಮಾಡುತ್ತೀವಿ, ಇಲ್ಲದಿದ್ದರೆ ಬೇರೆ ಮನೆಗೆ ಹೋಗುತ್ತಿವಿ " ಎಂದರು. ಇದನ್ನು ಕೇಳಿದ ಅನಸೂಯಾದೇವಿ ಇವರು ಸಾಮಾನ್ಯ ಪುರುಷರಲ್ಲ ಎಂದು ಅರಿತಳು. ತನ್ನ ಪಾತಿವ್ರತೆಯನ್ನು ಪರೀಕ್ಷಿಸಲು ಬಂದಿದ್ದಾರೆ ಎಂದುಕೊಂಡಳು. ತನ್ನ ಪತಿಯನ್ನು ನೆನೆದು ವಿವಸ್ತ್ರಳಾಗಿ ಊಟ ಬಡಿಸಲು ಹೊರಬಂದು ನೋಡಿದರೆ, ತ್ರಿಮೂರ್ತಿಗಳು ಪುಟ್ಟ ಮಕ್ಕಳಾಗಿ ಎಲೆಯ ಮುಂದೆ ಅಂಬೆಗಾಲು ಇಡುತ್ತ ಅಳುತ್ತಿದ್ದರು. ಈ ಅಳುವ ಕಂದಮ್ಮಗಳಿಗೆ ಅನಸೂಯಾ ತನ್ನ ಹಾಲು ಕುಡಿಸಿ, ಜೋಲಿಯಲ್ಲಿ ಹಾಕಿ ಮಲಗಿಸಿದಳು. ಅಷ್ಟು ಹೊತ್ತಿಗೆ ಮನೆಗೆ ಬಂದ ಅತ್ರಿಮುನಿಗಳು, ಈ ಮಕ್ಕಳನ್ನು ನೋಡಿ , ಯಾರಿವರು ಎಂದು ಪತ್ನಿಯನ್ನು ಕೇಳಿದರು. ನಡೆದ ಸಂಗತಿಯನ್ನು ಪತ್ನಿಯಿಂದ ತಿಳಿದ ಅತ್ರಿಗಳು, ಇವರು ತ್ರಿಮೂರ್ತಿಗಳೆಂದು ಅರಿತು ನಮಸ್ಕರಿಸಿದರು. ಆಗ ಬ್ರಹ್ಮ , ವಿಷ್ಣು , ಮಹೇಶ್ವರರು ಪ್ರತ್ಯಕ್ಷರಾದರು. ಅನಸೂಯಾ ದೇವಿಯ ಪಾತಿವ್ರತೆಯನ್ನು ಕೊಂಡಾಡಿ, ಏನು ವರ ಬೇಕಾದರೂ ಕೇಳು ಎಂದರು. ಆಕೆಯು, "ತ್ರಿಮೂರ್ತಿಗಳೇ, ನೀವು ಮಕ್ಕಳಾಗಿ ನಮ್ಮ ಮನೆಗೆ ಬಂದಿದ್ದಿರಾ, ನಮ ಮನೆಯಲ್ಲೇ ಇರಿ" ಎಂದು ಕೇಳಿದಳು. ಅವರು ತಥಾಸ್ತು ಎನ್ನಲು, ಆ ಮೂರೂ ಮಕ್ಕಳು, ಅತ್ರಿ ಮುನಿಗಳ ಮನೆಯಲ್ಲೇ ಇಳಿದರು. ದೊಡ್ಡವರಾದ ಮೇಲೆ, ಬ್ರಹ್ಮನು ಚಂದ್ರನಾಗಿ ಚಂದ್ರಲೋಕಕ್ಕೆ ತೆರಳಿದನು, ಮಹೇಶ್ವರನು ಧೂರ್ವಸನಾಗಿ ತೆರಳಿದನು. ಇವರಿಬ್ಬರು ಹೋಗುವ ಮುನ್ನ ತಮ್ಮ ಒಂದು ಅಂಶವನ್ನು ವಿಷ್ಣುವಿನಲ್ಲಿ ಬಿಟ್ಟು ಹೋದರು. ಆಗ ವಿಷ್ಣು ಸ್ವರೂಪನಾದ ದತ್ತನಿಗೆ ಮೂರು ಮುಖಗಳಾವು. ಇವರೇ ಗುರು ದತ್ತಾತ್ರೇಯರಾದರು.
ದತ್ತಾತ್ರೇಯರು ಗುರು ಪರಂಪರೆಯಲ್ಲಿ ಆದಿ ಗುರು. ಶ್ರೀಪಾದ ಶ್ರೀವಲ್ಲಭ, ನರಸಿಂಹ ಸರಸ್ವತಿ, ಸಾಯಿ ಬಾಬಾ ಇವರೆಲ್ಲ ಗುರುಗಳ ಅವತಾರಗಳು. ಈ ಕಲಿಯುಗದಲ್ಲಿ ಗುರುವಿನ ಸೇವೆ ಮಾಡಿದರೆ ಮಾತ್ರ ಮುಕ್ತಿ ಸಿಗುತ್ತದೆ ಎಂಬ ನಂಬಿಕೆ ಇದೆ. ಗುರುವಿನ ಶಕ್ತಿ, ಮಹಿಮೆ ಅಪಾರ. ಸರಸ್ವತಿ ಗಂಗಧರರು ಗುರುಗಳ ಮಹಿಮೆಯನ್ನು "ಗುರು ಚರಿತ್ರೆ " ಪುಸ್ತಕದಲ್ಲಿ ಬರೆದಿದ್ದರೆ. ಇದರಲ್ಲಿ 52 ಅಧ್ಯಯವಿದೆ.ದತ್ತನ ಭಕ್ತರು ಗುರುಚರಿತ್ರೆಯನ್ನು ಪಾರಾಯಣ ಮಾಡುತ್ತಾರೆ.ಸಂಕ್ಷಿಪ್ತ ಗುರುಚರಿತ್ರೆಯನ್ನು ಇಲ್ಲಿ ಓದಬಹುದು


ದತ್ತಾತ್ರೇಯ ಜಯಂತಿ ಪ್ರಯುಕ್ತ ದತ್ತಮೂರ್ತಿ ಆರಾಧನೆ, ದತ್ತ ಭಜನೆ,ಔದುಂಬರ ವೃಕ್ಷಕ್ಕೆ ಪೂಜೆ, ಗುರುಚರಿತ್ರೆ ಪಾರಯಣೆ ಮಾಡುತ್ತಾರೆ. ದತ್ತಾತ್ರೇಯ ಅಷ್ಟೋತ್ತರ ಕೆಳಗಿದೆ . ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.



Ashtottara Audio Link by Bombay Sisters

ಗುರು ದತ್ತಾತ್ರೇಯರ ಹಾಡುಗಳು:
ಗುರು ದತ್ತಾತ್ರೇಯರ ಅನುಗ್ರಹ ಎಲ್ಲರ ಮೇಲೆ ಸದಾ ಇರಲಿ:)
Blog Widget by LinkWithin