Home My Profile Introduction List of All Topics Devotional Songs Stotras in English

Panchanga 2016/2017 List of Festivals All Devi Stotras Contact Me Thanks

July 6, 2009

Guru Poornima / Vyasa Poornima /ಗುರು ಪೂರ್ಣಿಮಾ / ವ್ಯಾಸ ಪೂರ್ಣಿಮಾ


ಗುರು ಬ್ರಹ್ಮ ಗುರು ವಿಷ್ಣು ಗುರು ದೇವೋ ಮಹೇಶ್ವರ

ಗುರು ಸಾಕ್ಷಾತ್ ಪರಬ್ರಹ್ಮ ತಸ್ಮೈ ಶ್ರೀ ಗುರವೇ ನಮಃ


ಗುರು ಪೂರ್ಣಿಮಾ ಅಥವಾ ವ್ಯಾಸ ಪೂರ್ಣಿಮೆಯನ್ನು ಆಷಾಢ ಮಾಸದ ಪೂರ್ಣಿಮೆಯ ದಿನ ಆಚರಿಸುತ್ತಾರೆ. ಇಂದು ವೇದ ವ್ಯಾಸರ ಜನ್ಮ ದಿನ. ಇವರು ೪ ವೇದಗಳನ್ನು ಸಂಕಲನ ಮಾಡಿದರು ಎಂಬ ನಂಬಿಕೆ. ನಮ್ಮ ಹಿಂದೂ ಧರ್ಮದ ಪ್ರಕಾರ ಮನುಷ್ಯನಿಗೆ ಪರಬ್ರಹ್ಮನ ಜ್ಞಾನ ಉಂಟಾಗಿ ಮೋಕ್ಷ ಹೊಂದುವುದೇ ಜೀವನದ ಉದ್ದೇಶ. ಈ ಗುರಿಯನ್ನು ತಲುಪುವುದಕ್ಕೆ ವೇದಗಳು ಪ್ರಮುಖ ಪಾತ್ರ ಹೊಂದಿದೆ. ಈ ವೇದಗಳನ್ನು ನಮಗೆ ಕೊಟ್ಟಿರುವ ವೇದ ವ್ಯಾಸರು ಧರ್ಮ ಗುರುಗಳು. ಇವರಿಗೆ ನಮ್ಮ ಅನಂತ ನಮಸ್ಕಾರಗಳು.

ಗುರು ಎಂಬ ಪದವು ಸಂಸ್ಕೃತದಿಂದ ಬಂದಿದೆ. 'ಗು' ಎಂದರೆ ಅಂಧಕಾರ ,ಕತ್ತಲೆ . 'ರು' ಎಂದರೆ ತೊಲಗಿಸು, ದೂರ ಮಾಡು ಎಂದರ್ಥ. ಗುರು ಎಂದರೆ ಅಂಧಕಾರವನ್ನು ತೊಲಗಿಸುವವನು ಎಂದು ಅರ್ಥೈಸಬಹುದು. ಪೂರ್ಣಿಮೆಯ ದಿನ ಚಂದ್ರನು ಪ್ರಕಾಶಮಾನ ಆಗಿರುತ್ತಾನೆ. ಚಂದ್ರನಂತೆ ಪ್ರಕಾಶಿಸುತ್ತಿರುವ ಗುರುವು ನಮ್ಮ ಬಾಳಲ್ಲಿರುವ ಅಂಧಕಾರವನ್ನು ತೊಲಗಿಸಿ , ಜ್ಞಾನದ ಬೆಳಕನ್ನು ಕೊಡುತ್ತಾನೆ ಎಂಬ ಸಂಕೇತವಾಗಿ ಈ ಗುರು ಪೂರ್ಣಿಮಾ ಹಬ್ಬವನ್ನು ಆಚರಿಸುತ್ತಾರೆ.

ಶಂಕರಾಚಾರ್ಯರು, ದತ್ತಾತ್ರೇಯರು, ರಾಘವೇಂದ್ರ ಸ್ವಾಮಿಗಳು, ರಮಣ ಮಹರ್ಷಿ, ರಾಮಕೃಷ್ಣ ಪರಮಹಂಸ ,ಸಾಯಿ ಬಾಬರವರು, ಶ್ರೀ ರವಿಶಂಕರ - ಹೀಗೆ ಹಲವಾರು ಮಹಾಪುರುಷರು ಗುರು ಸ್ವರೂಪರಾಗಿ ನಮಗೆಲ್ಲ ಮಾರ್ಗದರ್ಶನ ನೀಡಿದ್ದಾರೆ. ಪ್ರತಿಯೊಬ್ಬರೂ ತಮ್ಮ ಇಷ್ಟದಂತೆ ಗುರುಗಳನ್ನು ಅನುಸರಿಸುತ್ತಾರೆ. ಈ ದಿನ ಇಷ್ಟೊಂದು ಪ್ರಾಬಲ್ಯ, ಮಹಿಮೆ ಇರುವ ಗುರುಗಳಿಗೆ ನಮನಗಳನ್ನು ಸಲ್ಲಿಸುತ್ತಾರೆ. ಇದಲ್ಲದೇ ನಮ್ಮ ತಾಯಿ, ತಂದೆ, ಪಾಠ/ವಿದ್ಯೆ/ಸಂಗೀತ/ಕಲೆ ಹೇಳಿಕೊಟ್ಟಿರುವ ಗುರುಗಳು - ಇವರಿಗೂ ನಮಸ್ಕಾರಗಳನ್ನು ಸಲ್ಲಿಸಬೇಕು.

ಹಬ್ಬವನ್ನು ಆಚರಿಸುವುದಕ್ಕೆ ವಿಶೇಷವಾದ ಪೂಜೆ ಅಂತಿಲ್ಲ. ನಂಬಿರುವ ಗುರುಗಳ ಪೂಜೆ ಮಾಡುತ್ತಾರೆ. ಗುರುಗಳ ಧ್ಯಾನ, ಭಜನೆ ಮಾಡುತ್ತಾರೆ. ಕೆಲವರು ಸತ್ಸಂಗ ಏರ್ಪಡಿಸುತ್ತಾರೆ. ಹಲವು ಕಡೆ ಗುರುಗಳಿಗೆ ಸತ್ಕಾರ ಕಾರ್ಯಕ್ರಮ(felicitation) ಇರುತ್ತದೆ. ಒಟ್ಟಿನಲ್ಲಿ ಈ ದಿನ ಗುರುವಿನ ಸ್ಮರಣೆಗೆ ಮೀಸಲಾಗಿದೆ.


Useful Links:

ಗುರುಗಳು ನಮ್ಮೆಲರಿಗೂ ಜ್ಞಾನ ನೀಡಿ ಕಾಪಾಡಲಿ :)

June 26, 2009

Vishnu Sahasranama in Kannada / ಶ್ರೀ ವಿಷ್ಣು ಸಹಸ್ರನಾಮ ಸ್ತೋತ್ರ

ಶ್ರೀ ವಿಷ್ಣು ಸಹಸ್ರನಾಮವನ್ನು ಎಲ್ಲರೂ ಕೇಳಿಯೇ ಇರುತ್ತೀವಿ. ಇದು ನಮ್ಮ ಹಿಂದೂ ಧರ್ಮದ ಪವಿತ್ರ, ಶ್ರೇಷ್ಠ ಮತ್ತು ಬಹಳ ಸಾಮಾನ್ಯವಾಗಿ ಪಠಿಸುವ ಸ್ತೋತ್ರ . ಸಹಸ್ರ ಎಂದರೆ ಸಾವಿರ ಎಂದರ್ಥ. ವಿಷ್ಣು ಸಹಸ್ರನಾಮದಲ್ಲಿ ವಿಷ್ಣುವಿನ 1000 ನಾಮಗಳಿವೆ. ಇದು ಮಹಾಭಾರತದ ಅನುಶಾಸನ ಪರ್ವದ ೧೪೯ ನೆ ಅಧ್ಯಾಯದಲ್ಲಿ ಕಂಡುಬರುತ್ತದೆ. ಮಹಾಭಾರತದ ಯುದ್ಧ ಆದ ಮೇಲೆ ಭೀಷ್ಮನು ಮರಣಶಯ್ಯೆ ಯಲ್ಲಿ ಇರುವಾಗ ಯುಧಿಷ್ಟಿರನು ಅವರನ್ನು ಧರ್ಮ ಪ್ರಶ್ನೆಗಳ ಉತ್ತರ ಕೇಳುತ್ತಾನೆ. ಭೀಷ್ಮರು ಉತ್ತರವಾಗಿ ಶ್ರೀ ವಿಷ್ಣು ಸಹಸ್ರನಾಮವನ್ನು ಹೇಳುತ್ತಾರೆ. ಶ್ರೀ ಶಂಕರಾಚಾರ್ಯರು, ಪರಾಶರ ಭಟ್ಟರು, ಮಧ್ವಾಚಾರ್ಯರು, ಮುಂತಾದವರು ಇದಕ್ಕೆ ತಮ್ಮದೇ ರೀತಿಯಲ್ಲಿ ಭಾಷ್ಯ ಬರೆದಿದ್ದಾರೆ. ಒಂದು ಸ್ತೋತ್ರ ಪಠಿಸುವುದರಿಂದ ಎಲ್ಲಾ ತರದ ಪುಣ್ಯ ಪ್ರಾಪ್ತಿ ಆಗುವುದು ಎಂಬ ನಂಬಿಕೆ.

ಈ ಸ್ತೋತ್ರವನ್ನು BARAHA ಉಪಯೋಗಿಸಿ ಕನ್ನಡದಲ್ಲಿ ಬರೆದಿದ್ದೀನಿ.8 ಪುಟಗಳಿವೆ. ದೊಡ್ಡದಾಗಿ ಮಾಡಲು ಚಿತ್ರದ ಮೇಲೆ ಕ್ಲಿಕ್ ಮಾಡಿ.

Pages 1 - 4



Pages 5 - 8



ಈ ಸ್ತೋತ್ರವನ್ನು ಹಲವಾರು ಗಾಯಕರು ಹಾಡಿದ್ದಾರೆ. M.S.Subbulakshmi ಅವರು 1970 ಅಲ್ಲಿ ಹಾಡಿರುವ ಧ್ವನಿ ಮುದ್ರಣ 40 ವರ್ಷಗಳಾದರೂ ಇಂದಿಗೂ ಅತ್ಯಂತ ಜನಪ್ರಿಯ!!!

1.AudioLink - M.S.Subbulakshmi

2.AudioLink - Mahanadhi Shobhana

3.AudioLink - M.S.Sheela


Meaning of Vishnu Sahasranama Stotram


Vishnu Sahasranamam Video by M.S.Subbalakshmi


ಭಗವಂತನು
ಎಲ್ಲರನ್ನು ಹರಸಿ ಕಾಪಾಡಲಿ:)

June 17, 2009

Sankashtahara Chaturthi / Sankashta Chauthi Vrata / ಸಂಕಷ್ಟಹರ ಚತುರ್ಥಿ ವ್ರತ

Update:Pooja Vidhana Sahitya

A lot of you have asked for pooja vidhana sahitya for many vratas. I have Vrata book which has sahitya for all major festivals. But each vrata vidhana is some 25 - 30 pages. So it is not possible to scan so many pages!! I am sorry. But I did find this link, where you can purchase all devotional books online. I have never purchased from this site. So I do not know anything about their service. You can try it at your own risk.

Buy Vratha Books Online

----------------------------------------------------------------------------

ಸಂಕಷ್ಟಹರ ಚತುರ್ಥಿ ವ್ರತ - ಹೆಸರೇ ಹೇಳುವಂತೆ ಸಂಕಷ್ಟಗಳನ್ನು ಹರಣ/ಪರಿಹಾರ ಮಾಡುವಂತ ವ್ರತ. ಸಂಕಷ್ಟ ಚೌತಿ ವ್ರತ / ಸಂಕಷ್ಟ ಗಣಪತಿ ವ್ರತ ಎಂದೂ ಕರೆಯುತ್ತಾರೆ. ವ್ರತದಲ್ಲಿ ಶ್ರೀ ವಿನಾಯಕನಿಗೆ ಪೂಜೆ ನಡೆಯುತ್ತದೆ. ಪ್ರತಿ ತಿಂಗಳು ಬಹುಳ/ಕೃಷ್ಣ ಪಕ್ಷದ ಚತುರ್ಥಿ ದಿನ ವ್ರತವನ್ನು ಮಾಡುತ್ತಾರೆ. ವ್ರತವನ್ನು ಶ್ರಾವಣ ಬಹುಳ ಚತುರ್ಥಿ ದಿನ ಪ್ರಾರಂಭ ಮಾಡಬೇಕು ಅಂತ ಇದೆ.

ದಿನ ಬೆಳಿಗ್ಗೆ ಎಳ್ಳನ್ನು ಅರೆದು ಹಾಲು ಅಥವಾ ಎಣ್ಣೆಯಲ್ಲಿ ಬೆರೆಸಿ ತಲೆಗೆ ಹಚ್ಚಿ ಮಂಗಳ ಸ್ನಾನ ಮಾಡಬೇಕು. ಸಂಕಷ್ಟಹರ ಗಣಪತಿ ವ್ರತ ಮಾಡುತ್ತಿದ್ದೀನಿ ಅಂತ ಸಂಕಲ್ಪ ಮಾಡಬೇಕು. ದಿನವೆಲ್ಲ ಉಪವಾಸ ಇರಬೇಕು. ಇದು ಕಷ್ಟವಾದರೆ ಹಾಲು, ಹಣ್ಣು ಸೇವಿಸಬಹುದು. ಗಣಪತಿ ಪೂಜೆಯನ್ನು ಚಂದ್ರನ ಪ್ರಕಾಶದಲ್ಲಿ ಮಾಡಬೇಕು. ಅದ್ದರಿಂದ ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು.

ಪೂಜೆ ಮಾಡುವ ಸ್ಥಳವನ್ನು ಸ್ವಚ್ಚಗೊಳಿಸಿ, ಅಷ್ಟದಳ ಪದ್ಮದ ರಂಗವಲ್ಲಿ ಹಾಕಬೇಕು. ಇದರ ಮೇಲೆ ಕಲಶ ಸ್ಥಾಪಿಸಬೇಕು. ಒಂದು ಚೊಂಬಿನಲ್ಲಿ ಸ್ವಲ್ಪ ನೀರು ಹಾಕಿ, ಅದರ ಮೇಲೆ ತೆಂಗಿನಕಾಯಿ ಇಟ್ಟು, ಪಕ್ಕದಲ್ಲಿ ವೀಳ್ಯದ ಎಲೆ ಇಡಬೇಕು. ಕಳಶವನ್ನು ಅಕ್ಕಿ ಹರಡಿರುವ ತಟ್ಟೆಯ ಮೇಲೆ ಇಡಬೇಕು. ತಟ್ಟೆಯನ್ನು ಅಷ್ಟದಳ ರಂಗೋಲಿಯ ಮೇಲೆ ಇಡಬೇಕು. ಕಲಶಕ್ಕೆ ಗಣಪತಿಯನ್ನು ಆವಾಹನೆ ಮಾಡಿ, ಕಲಶವನ್ನು ಪೂಜೆ ಮಾಡಬೇಕು. ಕಲಶ ಸ್ಥಾಪನೆ ಚಿತ್ರ ಕೆಳಗಿದೆ.click on the image to enlarge



ಕಲಶ ಸ್ಥಾಪನೆ

ನೈವೇದ್ಯಕ್ಕೆ ಕರಿಗಡುಬು, ಮೋದಕ ಮಾಡಬೇಕು. ಮೈದಾ ಹಿಟ್ಟು ,ರವೆಯನ್ನು ಕಲಸಿ ಕಣಕ (dough) ಮಾಡಿ, ಒಳಗೆ ಹೂರಣ ಸೇರಿಸಿ ಎಣ್ಣೆಯಲ್ಲಿ ಕರಿಯುತ್ತಾರೆ. ಹೂರಣ 2 ತರಹ ಮಾಡುತ್ತಾರೆ - dry (ಕೊಬ್ಬರಿ ತುರಿ, ಸಕ್ಕರೆ ,ಏಲಕ್ಕಿ) ಅಥವಾ wet (ಬೆಲ್ಲ,ಕಾಯಿ ತುರಿ, ಏಲಕ್ಕಿ). ಈ ಹಬ್ಬಕ್ಕೆ ಮಾಡುವಾಗ ಹೂರಣಕ್ಕೆ ಎಳ್ಳನ್ನು ಸೇರಿಸಬೇಕು. ನೈವೇದ್ಯಕ್ಕೆ ಕನಿಷ್ಠ 10 ಕರಿಗಡುಬು 10 ಮೋದಕಗಳನ್ನು ಮಾಡಿಕೊಳ್ಳಬೇಕು.
ಪೂಜೆಯ ನಂತ 5 ಕಡುಬು, 5 ಮೋದಕ ದಾನ ಮಾಡಿ, ಉಳಿದ 5 ಕಡುಬು, ಮೋದಕ ನೀವು ಪ್ರಸಾದವಾಗಿ ಸ್ವೀಕರಿಸಿ. ಹತ್ತಕ್ಕಿಂತ ಜಾಸ್ತಿ , ಎಷ್ಟು ಬೇಕೋ ಅಷ್ಟು ಕರಿಗಡುಬು, ಮೋದಕ ಮಾಡಿಕೊಳ್ಳಬಹುದು :)

ಚಂದ್ರೋದಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ:

1.Moonrise and Moonset time

2.Moonrise and Moonset calculator

ಸಂಜೆ/ರಾತ್ರಿ ಚಂದ್ರೋದಯ ಆದ ಮೇಲೆ ಪೂಜೆ ಶುರು ಮಾಡಬೇಕು. ಕಲಶ ಸ್ಥಾಪಿಸಿ , ಜೊತೆಗೆ ಗಣಪತಿ ಪಟ, ವಿಗ್ರಹವನ್ನು ಇಟ್ಟು ಪೂಜೆ ಮಾಡಿ. ಸಾಮನ್ಯವಾಗಿ ಉಪಯೋಗಿಸುವ ಪೂಜಾ ಸಾಮಗ್ರಿಗಳ ಪಟ್ಟಿ ಇಲ್ಲಿದೆ. ಪೂಜಾ ವಿಧಾನ ಇಲ್ಲಿದೆ. ಗಣಪತಿ ಅಷ್ಟೋತ್ತರ ಇಲ್ಲಿದೆ. ವಿನಾಯಕನಿಗೆ ಷೋಡಶೋಪಚಾರದಿಂದ ಪೂಜೆ ಮಾಡಬೇಕು. ಕರಿಗಡುಬು, ಮೋದಕವನ್ನು ನೈವೇದ್ಯ ಮಾಡಬೇಕು. ಪೂಜೆಯ ನಂತರ ಕಥಾ ಶ್ರವಣ ಮಾಡಬೇಕು. ಪೂಜೆಯ ನಂತರ ಊಟ ಮಾಡಬಹುದು.

ನಮ್ಮ ಮನೆಯಲ್ಲಿ ಸಂಕಷ್ಟಹರ ಚತುರ್ಥಿ ಪೂಜೆ
(click on the image to enlarge)

ಸಂಕಷ್ಟಹರ ಗಣಪತಿ ಪೂಜಾ ವಿಧಾನದ ಧ್ವನಿ ಮುದ್ರಣ ಇಲ್ಲಿ ಕೇಳಬಹುದು:

Vrata + Kathe Audio Link


ಪೂಜೆಯ ನಂತರ 5 ಕರಿಗಡುಬು, 5 ಮೋದಕ ಮತ್ತು ಉಪಾಯಿನ ದಾನ, ದಕ್ಷಿಣೆಯನ್ನು ಸತ್ಪಾತ್ರರಿಗೆ ದಾನ ಕೊಟ್ಟು ಆಶೀರ್ವಾದ ಪಡೆಯಿರಿ. ಹೀಗೆ ೨೧ ಸಾರಿ ವ್ರತಗಳನ್ನು ಆಚರಿಸಿ ನಂತರ ಉದ್ಯಾಪನ ಮಾಡುತ್ತಾರೆ. ನಿಮ್ಮ ಇಚ್ಛೆ , ಶಕ್ತಿ ಸಾಮರ್ಥ್ಯಗಳಿಗೆ ಅನುಸಾರವಾಗಿ ಎಷ್ಟು ಸಾರಿ ಬೇಕಾದರೂ ವ್ರತವನ್ನು ಆಚರಿಸಬಹುದು.
ಗಣಪತಿಯು ನಿಮ್ಮ ಎಲ್ಲ ಸಂಕಷ್ಟಗಳನ್ನು ಪರಿಹರಿಸಲಿ :)

ಅಂಗಾರಕ ಸಂಕಷ್ಟ ಚತುರ್ಥಿ / ಅಂಗಾರಕಿ ಸಂಕಷ್ಟ ಚತುರ್ಥಿ
ಅಂಗಾರಕ ಎಂದರೆ ಮಂಗಳ ಗ್ರಹ . ಹೀಗಾಗಿ ಮಂಗಳ ವಾರ ಬರುವ ಸಂಕಷ್ಟ ಚತುರ್ಥಿಗೆ ಈ ಹೆಸರು. ಇದು ಅಪರೂಪ. ವರ್ಷದಲ್ಲಿ ಒಂದು - ಎರಡು ಬಾರಿ ಬರಬಹುದು ಅಷ್ಟೇ. ಅಂಗಾರಕ ಸಂಕಷ್ಟ ಚತುರ್ಥಿ ಹೆಚ್ಚು ವಿಶೇಷ. ಈ ದಿನ ಪೂಜೆ ಮಾಡಿದರೆ ಶ್ರೇಷ್ಟ ಎಂಬ ನಂಬಿಕೆ.


ಗಣಪತಿ ಹಾಡು/ ಸ್ತೋತ್ರಗಳು:


5.Ganesha Sahasranama
6.Ganesha Pratah Smarana Stotra

Blog Widget by LinkWithin